ಉಜಿರೆ: ಸಂತ ಅಂತೋಣಿ ಚರ್ಚ್ ನಲ್ಲಿ (ಸಾಂತ್ ಮಾರಿ) ವಾರ್ಷಿಕ ಹಬ್ಬ

0

ಉಜಿರೆ: ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ವಾರ್ಷಿಕ ಹಬ್ಬ ಜ.4ರಂದು ಆಚರಿಸಲಾಯಿತು.

ಅನುಗ್ರಹ ಪದವಿ ಪೂರ್ವ ಕಾಲೇಜಿನ ಮಾಜಿ ಪ್ರಾಂಶುಪಾಲರು ವ. ಫಾ. ಉದಯ್ ಜೋಸೆಫ್ ಫೆರ್ನಾಂಡಿಸ್ ಪ್ರಧಾನ ದಿವ್ಯ ಬಲಿ ಪೂಜೆ ಅರ್ಪಿಸಿ ಪ್ರವಚನ ನೀಡಿದರು. ಬೆಳ್ತಂಗಡಿ ಹೊಲಿ ರೆಡೀಮಾರ್ ಚರ್ಚ್ ಬೆಳ್ತಂಗಡಿ ವಲಯದ ಪ್ರಧಾನ ಧರ್ಮ ಗುರು ವ. ಫಾ. ಜೋಸೆಫ್ ಕಾರ್ಡೋಜ, ಉಜಿರೆ ಸಂತ ಅಂತೋಣಿ ಚರ್ಚ್ ನ ಪ್ರಧಾನ ಧರ್ಮ ಗುರು ವ. ಫಾ. ಜೇಮ್ಸ್ ಡಿಸೋಜ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಲೋಬೊ, ಮಡಂತ್ಯಾರು, ಮಾವಿನಕಟ್ಟೆ, ಬದ್ಯರ್, ನೈನಾಡು, ವೇಣೂರು, ನಾರಾವಿ, ಅಳದಂಗಡಿ, ಮಂಜೊಟ್ಟಿ, ಇಂದ ಬೆಟ್ಟು, ದಯಾಳ್ ಭಾಗ್ ಆಶ್ರಮದ ಧರ್ಮಗುರುಗಳು ಭಾಗವಹಿಸಿದರು. ಚರ್ಚ್ ಪಾಲನಾ ಪರಿಷತ್ ಉಪಾದ್ಯಕ್ಷ ಆಂಟನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಚರ್ಚ್ ಪಾಲನಾ ಪರಿಷತ್ ಸದಸ್ಯರು ಸಹಕರಿಸಿದರು, ದಾನ ನೀಡಿದ ದಾನಿಗಳಿಗೆ ಮೊಂಬತ್ತಿ ನೀಡಿ ಗೌರವಿಸಲಾಯಿತು. ತಾಲೂಕಿನಾದ್ಯಂತ ಚರ್ಚ್ ಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here