ಬಿಲ್ಲವ ಜನಪದ ಸಮ್ಮೇಳನ ಕಾರ್ಯಕ್ರಮದ ಪೂರ್ವಭಾವಿ ಸಭೆ

0

ಬೆಳ್ತಂಗಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ, ಯುವ ಬಿಲ್ಲವ ವೇದಿಕೆ ,ಮಹಿಳಾ ಬಿಲ್ಲವ ವೇದಿಕೆ ಹಾಗೂ ಯುವವಾಹಿನಿ(ರಿ.)ಬೆಳ್ತಂಗಡಿ
ಮತ್ತು ವೇಣೂರು ಘಟಕದ ಸಹಕಾರದೊಂದಿಗೆ ಜ.22 ರಂದು ಬೆಳ್ತಂಗಡಿ ಯಲ್ಲಿ ನಡೆಯಲಿರುವ ಬಿಲ್ಲವ ಜನಪದ ಸಮ್ಮೇಳನ -2023 “ಜೀಟಿಗೆ” ಸತ್ಯೊದ ತುಡರ್ ಕಾರ್ಯಕ್ರಮದ ಪೂರ್ವಬಾವಿ ಸಭೆಯು ಜ.2 ರಂದು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯಲ್ಲಿ ನಡೆಯಿತು.

ಬಿಲ್ಲವ ಸಮಾಜದ ನಾಟಿ ವೈದ್ಯರ,ದೈವ ಪರಿಚಾರಕರ,ಮೂರ್ತೆದಾರರ,ಗುತ್ತು ಬಾರಿಕೆಯವರ ಮತ್ತು ಶಾಂತಿಗಳ ವಿಚಾರ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನ ಸಂಚಾಲಕರಾದ ಸಂಪತ್ ಬಿ ಸುವರ್ಣರವರು ಸಭೆಗೆ ತಿಳಿಸಿದರು ಮತ್ತು ವಿವಿಧ ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಸಂಚಾಲಕರನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ ಜಯವಿಕ್ರಮ್ ಕಲ್ಲಾಪು,ಕೋಶಾಧಿಕಾರಿ ಅಭಿನಂದನ್ ಹರೀಶ್,ಕಾನೂನು ಸಲಹೆಗಾರರಾದ ಮನೋಹರ್ ಕುಮಾರ್,ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ನಿತೀಶ್ ಹೆಚ್,ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಅಶ್ವಥ್ ಕುಮಾರ್,ನಿರ್ದೇಶಕರಾದ ಲಕ್ಷ್ಮಣ್ ಪೂಜಾರಿ,ರಾಜೀವ ಸಾಲಿಯಾನ್ ಮುಂಡೂರು,ರಮೇಶ್ ಪೂಜಾರಿ ಪಡ್ಡಾಯಿಮಜಲು,ಗೋಪಾಲ ಪೂಜಾರಿ,ಪುರುಷೋತ್ತಮ ಧರ್ಮಸ್ಥಳ ಹಾಗೂ ಸಂಘದ ಮಾಜಿ ನಿರ್ದೇಶಕರು, ಬಿಲ್ಲವ ಮಹಿಳಾ ವೇದಿಕೆಯ ಸದಸ್ಯರು ,ಯುವ ಬಿಲ್ಲವ ವೇದಿಕೆ ಮತ್ತು ಯುವವಾಹಿನಿಯ ಪದಾದಿಕಾರಿಗಳು ಮಾಜಿ ಅಧ್ಯಕ್ಷರು ಸಲಹೆಗಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here