ಬರೆಂಗಾಯ: ವಣಸಾಯ ಸನ್ನಿದಾನಕ್ಕೆ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ

0

ನಿಡ್ಲೆ: ವಣಸಾಯ ಶ್ರೀ ವನದುರ್ಗಾ, ಕೊಡಂಗೆ ಶ್ರೀ ಭಟಾರಿ ಯಾನೆ ಮಲೆದೇವತೆ ಮತ್ತು ಕಲ್ಕುಡ ಗುಡ್ಡೆ ಶ್ರೀ ಕಲ್ಕುಡ-ಕಲ್ಲುರ್ಟಿ, ವ್ಯಾಘ್ರಚಾಮುಂಡಿ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಪ್ರತಿಷ್ಠಾ ಕಲಶೋತ್ಸವ ಹಾಗೂ ನೇಮೋತ್ಸವವು ಡಿ.28 ರಿಂದ ಡಿ.30ರವರೆಗೆ ಜರುಗಲಿದೆ.

ಆ ಪ್ರಯುಕ್ತ ಡಿ.28ರಂದು ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ವಿಶ್ವಸ್ಥ ಮಂಡಳಿ ಅಧ್ಯಕ್ಷರು ವಿಶ್ವನಾಥ ರಾವ್ ಹಿರ್ತಡ್ಕ, ಪ್ರತಿಷ್ಟಾ ಕಲಶೋತ್ಸವ ಸಮಿತಿ ಅಧ್ಯಕ್ಷರು ಮಧುಕರ ರಾವ್ ಮಚ್ಚಳೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಕಜೆ ವಿವಿಧ ಸಮಿತಿಯ ಪದಾಧಿಕಾರಿಗಳು, ಹೊರೆಕಾಣಿಕೆ ಸಮಿತಿ ಹಾಗೂ ಊರ ಪರವೂರ ಗ್ರಾಮಸ್ಥರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here