ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಗೆ ಡಿ.27ರಂದು ಜಿಲ್ಲಾ ತಂಡ ಭೇಟಿ

0

ಬೆಳ್ತಂಗಡಿ: 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತ್ ಗಳ ಪಟ್ಟಿಯನ್ನು ಸಲ್ಲಿಸಿದ್ದು, ಸದ್ರಿ ಗ್ರಾಮ ಪಂಚಾಯತ್ ಗಳಿಗೆ ಜಿಲ್ಲಾ ತಂಡ ಡಿ.27ರೊಳಗೆ ಭೇಟಿ ನೀಡಲಿದ್ದು, ಪ್ರತಿಯೊಂದು ಪ್ರಶ್ನಾವಳಿಗೆ ಸೂಕ್ತ ದಾಖಲಾತಿಯೊಂದಿಗೆ ಬುಕ್ ಲೆಟ್ ಅನ್ನು ತಯಾರಿಸಿ ಜಿಲ್ಲಾ ನೋಡಲ್ ಅಧಿಕಾರಿಯವರಿಗೆ ನೀಡುವುದು.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತ್ ಗಳ ಪಟ್ಟಿ:

ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕಿನ ಕೊಳ್ನಾಡು, ಇವತ್ತೂರು, ಕಡೇಶ್ವಾಲ್ಯ. ಬೆಳ್ತಂಗಡಿ ತಾಲೂಕಿನ ಉಜಿರೆ, ಮಡಂತ್ಯಾರು, ಕೊಕ್ಕಡ.ಕಡಬ ತಾಲೂಕಿನ ಕುಟ್ರುಪ್ಪಾಡಿ,ಅಲಂಕಾರು, ಬಿಳಿನೆಲೆ. ಮಂಗಳೂರು ತಾಲೂಕಿನ ಬಾಳ, ಮೂಡುಶೆಡ್ಡೆ, ಉಳಾಯಿಬೆಟ್ಟು. ಮೂಡಬಿದ್ರೆ ತಾಲೂಕಿನ ಪುತ್ತಿಗೆ, ದರೆಗುಡ್ಡೆ, ಪಾಲಡ್ಕ. ಮುಲ್ಕಿ ತಾಲೂಕಿನ ಪಡುಪಣಂಬೂರು, ಕಿಲ್ಪಾಡಿ, ಅತಿಕಾರಿಬೆಟ್ಟು. ಪುತ್ತೂರು ತಾಲೂಕಿನ ಒಳಮೊಗ್ರು, ಆರ್ಯಾಪು, ಬನ್ನೂರು. ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಮಂಡೇಕೋಲು. ಉಳ್ಳಾಲ ತಾಲೂಕಿನ ಮುನ್ನೂರು, ಪಜೀರು, ಸಜಿಪನಡು.

LEAVE A REPLY

Please enter your comment!
Please enter your name here