ಅಳದಂಗಡಿ ಕೆಪಿಎಲ್ ಸೀಸನ್ ಕ್ರಿಕೆಟ್ ಪಂದ್ಯಾಟದಲ್ಲಿ ಸತ್ಯದೇವತೆ ತಂಡ ಚಾಂಪಿಯನ್

0

ಅಳದಂಗಡಿ : ಜ್ಞಾನ ಮಾರ್ಗ ಕ್ರೀಡಾಂಗಣದಲ್ಲಿ ಜಿಎ ಕ್ರೀಕೆಟರ್ಸ್ ವತಿಯಿಂದ ನಡೆದ ಕೆಪಿಎಲ್ ಪ್ರೀಮಿಯರ್ ಲೀಗ್ 2022 ಸೀಸನ್ 6 ರ ಕ್ರಿಕೆಟ್ ಪಂದ್ಯಾಟದಲ್ಲಿ ಉಮೇಶ್ ಸುವರ್ಣ ನೇತೃತ್ವದ ಸತ್ಯದೇವತೆ ಅರ್ವ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಫೈನಲ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಬದ್ಯಾರು ಮತ್ತು ಸತ್ಯದೇವತೆ ತಂಡಗಳ ಮಧ್ಯೆ ಫೈನಲ್ ಪಂದ್ಯಾಟ ನಡೆದಿದ್ದು ಸತತ 3 ಸಲ ಟೈ ಆಯಿತು. ಅಂತಿಮವಾಗಿ ಟಾಸ್ ಮುಖೇನ ಸತ್ಯದೇವತೆ ತಂಡ ಚಾಂಪಿಯನ್ ಪಡೆದುಕೊಂಡಿದೆ.

ತಂಡದ ಗೆಲುವಿಗೆ ತಂಡದ ಎಲ್ಲಾ ಆಟಗಾರರು ಉತ್ತಮವಾಗಿ ಪ್ರದರ್ಶನ ನೀಡಿದ್ದು ಎಲ್ಲರ ಮೆಚ್ಚುಗೆ ಪಡೆದರು.

LEAVE A REPLY

Please enter your comment!
Please enter your name here