ಮುಂಡಾಜೆ ಮಸ್ಜಿದ್ ರಸ್ತೆಗೆ ಶಾಸಕರಿಂದ 5 ಲಕ್ಷ ರೂ. ಅನುದಾನ; ಶಿಲಾನ್ಯಾಸ

0

ಬೆಳ್ತಂಗಡಿ: ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತಡ್ಕ, ಮುಂಡಾಜೆ ಇದರ ಸಮಗ್ರ ಅಭಿವೃದ್ಧಿಯ ಭಾಗವಾಗಿ ಮಸೀದಿಗೆ ಆಗಮಿಸುವ ರಸ್ತೆಗೆ ಮೋರಿ ಅಳವಡಿಕೆ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಶಾಸಕ ಹರೀಶ್ ಪೂಂಜ ಅವರು 5 ಲಕ್ಷ‌ ರೂಪಾಯಿಗಳ ಅನುದಾನ ಮಂಜೂರುಗೊಳಿಸಿದ್ದು ಸದ್ರಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿತು.

ಶಾಸಕ ನಿರ್ದೇಶನದಂತೆ ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ರಂಜಿನಿ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾ. ಪಂ. ಸದಸ್ಯರಾದ ವಿಮಲಾ‌ ಶೇಖರ್, ಅಶ್ವಿನಿ ದಿನೇಶ್, ಗಣೇಶ್ ಬಂಗೇರ, ವಿಶ್ವನಾಥ ಶೆಟ್ಟಿ , ಅಗರಿ ರಾಮಣ್ಣ ಶೆಟ್ಟಿ, ಬಿಜೆಪಿ ಜಿಲ್ಲಾ ಎಸ್‌.ಟಿ ಮೋರ್ಚಾದ ಅಧ್ಯಕ್ಷ ಚೆನ್ನಕೇಶವ ನಾಯ್ಕ್ ಅತಿಥಿಗಳಾಗಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ, ಕಾರ್ಯದರ್ಶಿ ಅಬ್ಬಾಸ್ ಕೆ.ಎಮ್, ಖತೀಬ್ ಅಬ್ದುಲ್ ಹಮೀದ್ ದಾರಿಮಿ, ಶರೀಫ್ ಮುಸ್ಲಿಯಾರ್, ಪ್ರಮುಖರಾದ ಸಿದ್ದೀಕ್ ಸಾಗರ್, ಇಸ್‌ಹಾಕ್ ಯು. ಎ, ಅಬ್ದುಲ್ ಅಝೀಝ್, ಇಬ್ರಾಹಿಂ ಮಸೀದಿ ಬಳಿ, ಅಬ್ದುಲ್ ಹಮೀದ್ ಹಾಜಿ ಕಲ್ಲಾಜೆ, ಇಬ್ರಾಹಿಂ‌‌ ಕೆ ಕೂಳೂರು, ಅಹಮದ್ ಕುಂಞಿ, ರಫೀಕ್ ಹಾಜಿ, ಮುನೀರ್, ಸಿದ್ದೀಕ್ ಮಲಬಾರ್, ಹಮೀದ್ ಕೆಎಸ್‌ಆರ್‌ಟಿಸಿ, ಅಬ್ದುಲ್ಲ, ಇಬ್ರಾಹಿಂ ಚೆನ್ನಿಗುಡ್ಡೆ, ಉಮರ್, ಗುತ್ತಿಗೆದಾರ ಮುಹಮ್ಮದ್, ಸತ್ತಾರ್, ಯಾಕೂಬ್, ಹೈದರ್ ಹಾಗೂ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಆದಂ ಸಾಹೇಬ್ ನಡ ಮತ್ತು ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here