ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೋರಿಜಾತ್ರೆ ಉತ್ಸವ

0

ಕೊಕ್ಕಡ: ಶ್ರೀ ಬ್ರಹ್ಮಶ್ರೀ ಕೆ.ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಕೊಕ್ಕಡ ಶ್ರೀ ವೈಧ್ಯನಾಥೇಶ್ವರ ದೇವಸ್ಥಾನದಲ್ಲಿ ಕೋರಿ ಜಾತ್ರೆಯು ಡಿ.17 ರಂದು ನಡೆಯಿತು.

ಬೆಳಗ್ಗೆ ಗಣಹೋಮ,ಏಕದಶರುದ್ರ ಮತ್ತು ಮಹಾಪೂಜೆಯ ನಂತರ ದೇವರ ಗದ್ದೆಗೆ ಜಾನುವಾರುಗಳು ಇಳಿಯುವ ಮೂಲಕ ಕೋರಿ ಜಾತ್ರೆ ಪ್ರಾರಂಭಗೊಂಡಿತು.

ತಲೆಯಲ್ಲಿ ಸೊಪ್ಪಿನ ಕಟ್ಟನ್ನು ಹಿಡಿದು ಗದ್ದೆಯಲ್ಲಿ ನಡೆಯುವ ಮೂಲಕ ತಮ್ಮ ತಮ್ಮ ಹರಕೆಯನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here