ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಪರ್ಬ 2022 ಪಾಲಕ- ಶಿಕ್ಷಕರ ಸಮ್ಮಿಲನ

0

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಪರ್ಬ 2022, ಡಿ.16-17 ನಡೆಯುತ್ತಿದ್ದು. ಡಿ.17ರಂದು ಪಾಲಕ ಶಿಕ್ಷಕರ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಕಾರ್ಕಳ ಜೈನ ಮಠದ ಸ್ವಾಮೀಜಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ರವರು ಉಪನ್ಯಾಸ ನೀಡಿದರು. ಗುರುಬೆಳದಿಂಗಳು ಸಂಸ್ಥಾಪಕ ಪದ್ಮನಾಭ ಆರ್ ಮಾತನಾಡಿ ವಿದ್ಯೆ ಇವತ್ತಿನ ಕಾಲಘಟ್ಟದಲ್ಲಿ ಮಹತ್ವ ಪಡೆದಿದೆ. ಎಲ್ಲಾ ಕಡೆ ದೇವಸ್ಥಾನ, ದೈವಸ್ಥಾನ ಗಳು ಎದ್ದು ಕಾಣುತ್ತದೆ. ಶಿಕ್ಷಣ ಸಂಸ್ಥೆಗಳು ಬೆಳೆಯಬೇಕು ಎಂದರು.

ಹೈಕೋರ್ಟ್ ನ್ಯಾಯವಾದಿ ಮೋಹನ್ ಗೌಡ ಇದ್ಯಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಕ್ಸೆಲ್ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ, ಅಭಿರಾಮ್ ಬಿ. ಎಸ್., ಪ್ರಾಂಶುಪಾಲ ಡಾ ನವೀನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here