ಧರ್ಮಸ್ಥಳ:ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಚಿನ್ನಾಭರಣ ಕದ್ದು ಬೆಂಗಳೂರಿನಲ್ಲಿ ಬಂಧಿಸಿದ ಧರ್ಮಸ್ಥಳ ಪೊಲೀಸರು

0

ಧರ್ಮಸ್ಥಳ : ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯ ಶಾಂತಿವನಕ್ಕೆ ಚಿಕಿತ್ಸೆ ಗಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಾ ಚಿನ್ನಾಭರಣ ಕದ್ದು ಬೆಂಗಳೂರು ಸೇರಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಮತಿ ಹೇಮಾ ಬೆಂಗಳೂರು ನಿವಾಸಿ ಎಂಬವರು ತಮ್ಮ ಕುಟುಂಬದೊಂದಿಗೆ ದಿನಾಂಕ 30,06,2022 ರಂದು ಬೆಂಗಳೂರಿನಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯ ಶಾಂತಿವನಕ್ಕೆ ಚಿಕಿತ್ಸೆ ಬಗ್ಗೆ ಚಿಕಿತ್ಸೆಯಲ್ಲಿರುತ್ತಾ ತನ್ನ ಬಾಬು 2 ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ 6000 ರೂ ನಗದನ್ನು ವ್ಯಾನಿಟಿ ಬ್ಯಾಗನಲ್ಲಿಟ್ಟು ಯೋಗಕ್ಕೆ ಹೋಗಿದ್ದು ಮರಳಿ ಬಂದು ನೋಡಿದಾಗ ಅದರಲ್ಲಿದ್ದ 80 ಗ್ರಾಂ ತೂಕದ 2 ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ 5000 ರೂ ಇಲ್ಲದೇ ಇದ್ದುದರ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿದ್ದ ವರ್ಷ(26) ಬೆಂಗಳೂರಿನ ಲ್ಲಿರುವ ಇರುವ ಬಗ್ಗೆ ಖಚಿತ ಪಡಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 65 ಗ್ರಾಂ ತೂಕದ ಚಿನ್ನದ ಮಾಂಗಲ್ಯಸರವನ್ನು ವಶಪಡಿಸಿಕೊಂಡಿದ್ದು ಅಂದಾಜು ಮೌಲ್ಯ 2.50,000 ಆಗಿದೆ. ಆರೋಪಿ ವರ್ಷರನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

LEAVE A REPLY

Please enter your comment!
Please enter your name here