ಉಜಿರೆ: ಎಸ್‌ಡಿಎಂ ಹಿರಿಯ ವಿದ್ಯಾರ್ಥಿಗಳ ಕೋರ್ ಕಮಿಟಿ ಸಭೆ

0

ಉಜಿರೆ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಿರಿಯ ವಿದ್ಯಾರ್ಥಿ ಗಳ ಕೋರ್ ಕಮಿಟಿಯ ಪೂರ್ವಭಾವಿ ಸಭೆಯು ಡಿ.12 ರಂದು ಉಜಿರೆಯ ದಿಶಾ ಕಾಂಟಿನೆಂಟ್ ಸಭಾಂಗಣದಲ್ಲಿ ನಡೆಯಿತು.
ಎಸ್ ಡಿ ಎಂ ಕಾಲೇಜಿನ ಪ್ರಾಚಾರ್ಯ ಡಾ| ಜಯಕುಮಾರ್ ಶೆಟ್ಟಿ ಯವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ ಚಂದ್ರ ರವರು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ರಾಷ್ಟ್ರದ ನಾನಾ ಕಡೆ ಇರುವ ಎಸ್‌ಡಿಎಂ ಹಿರಿಯ ವಿದ್ಯಾರ್ಥಿಗಳು ತಮ್ಮ ಮಾತೃ ಸಂಸ್ಥೆಯಲ್ಲಿ ಸೇರಿ ಚಟುವಟಿಕೆಯಲ್ಲಿ ನಿರತರಾಗಲಿ ಎಂದು ಹಾರೈಸಿದರು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಮನೋರಮ ಭಟ್., ಜಗದೀಶ್ ಪ್ರಸಾದ್, ಪ್ರಶಾಂತ್,.ಶ್ರೀಧರ್ ಕೆ. ವಿ.,ತಿಮ್ಮಪ್ಪ ಗೌಡ,. ಅಶೋಕ್ ಭಟ್, ರಾಜೇಶ್ ಪೈ, ಶಶಿಕಿರಣ್., ವಸಂತ ಶರ್ಮ,. ಡಾ|ವಿಶ್ವನಾಥ್. ಎಸ್ ಎನ್ ಕಾಕತ್ಕರ್,. ಅರುಣ್ ಕುಮಾರ್., ಯುವರಾಜ ಪೂವಣಿ,.ನವೀನ್ ಕುಮಾರ್., ಶೈಲೇಶ್ ಮುಂತಾದವರಿದ್ದು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಧನಂಜಯ ಕುಮಾರ್ ಕೊನೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ನೆನಪಿನಂಗಳ ಕಾರ್ಯಕ್ರಮವನ್ನು ಪ್ರತಿ ತಿಂಗಳು ನಡೆಸುವಂತೆ ವಿಷಯ ಮಂಡಿಸಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here