ಉಪ್ಪಿನಂಗಡಿ: ಅಪಘಾತದಲ್ಲಿ ನಿಧನರಾದ ವಾಸು ಪೂಜಾರಿಯವರ ಮನೆಗೆ ಬಿ.ಎಂ.ಎಸ್ ನ ಹಿರಿಯ ನಾಯಕ ವಿಶ್ವನಾಥ ಶೆಟ್ಟಿ ಭೇಟಿ

0

ಉಪ್ಪಿನಂಗಡಿ: ಬಿಎಂಎಸ್ ಸಂಘದ ಸದಸ್ಯ ರಿಕ್ಷಾ ಚಾಲಕರಾಗಿದ್ದ ವಾಸು ಪೂಜಾರಿ ಅವರು ಇತ್ತೀಚೆಗೆ ಅಪಘಾತ ದಲ್ಲಿ ಮರಣ ಹೊಂದಿದ್ದು ಅವರ ಮನೆಗೆ ಬಿಎಂಎಸ್ ನ ಹಿರಿಯ ನಾಯಕರಾದ ವಿಶ್ವನಾಥ್ ಶೆಟ್ಟಿ ಅವರು‌ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬಿ.ಎಮ್.ಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ತಾಲೂಕು ಸಮಿತಿ ಅಧ್ಯಕ್ಷರಾದ ಕೃಷ್ಣ ಬೆಳಾಲು ಕಾರ್ಯದರ್ಶಿ ರಮೇಶ್ ಕೆ ಕುದ್ರಡ್ಕ, ಉಪ್ಪಿನಂಗಡಿ ರಿಕ್ಷಾ ಚಾಲಕ ಮಾಲಕ ಸಂಘದವರು, ಬಿಎಂಎಸ್ ಸಂಘ ದ ಸದಸ್ಯರು ಉಪಸ್ಥಿತರಿದ್ದರು.

ದಿ. ವಾಸು ಪೂಜಾರಿಯವರ ಕುಟುಂಬದವರಿಗೆ 5 ಲಕ್ಷ ರೂ ಪರಿಹಾರ ಅಸಂಘಟಿತ ಮಂಡಳಿಯ ವತಿಯಿಂದ ಲಭಿಸಲಿದ್ದು ಈ ಬಗ್ಗೆ ಮನೆಯವರಿಗೆ ಬಿಎಂಎಸ್ ನಿಂದ ಸಹಕಾರ ನೀಡುವುದಾಗಿ ಭರವಸೆ ಇತ್ತರು.

LEAVE A REPLY

Please enter your comment!
Please enter your name here