ಅಜ್ಜಾವರ ಅಡ್ಕ ಎಂಬಲ್ಲಿ ಎ.ಬಿ ಎಂಟರ್ ರ್ಪ್ರೈಸಸ್ ಮಾಲಕ ಎಬಿ ಅಶ್ರಫ್ ಸಹದಿಯವರು ನೂತನ ನಿರ್ಮಿಸಿದ ಎಬಿ ರೆಸಿಡೆನ್ಸಿಯನ್ನು ಮರ್ಕಜ್ ಶಿಲ್ಪಿ ಕಾಂತಪುರಂ ಎಪಿ ಅಬೂಭಕ್ಕರ್ ಮುಸ್ಲಿಯಾರ್ ರವರು ಅಮೃತ ಶಿಲೆ ಹಸ್ತಾಂತರ ಮಾಡುವ ಮೂಲಕ ಇತ್ತೀಚೆಗೆ ಉದ್ಘಾಟಿಸಿದರು.
ರೆಸಿಡೆನ್ಸಿ ಗೃಹ ಪ್ರವೇಶ ಕಾರ್ಯಕ್ರಮದ ಉದ್ಘಾಟನೆಯನ್ನು ಅ.26 ರಂದು ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ನೆರೆವೆರಿಸಿ ಮೌಲೂದ್ ಕಾರ್ಯಕ್ರಮ ಚಾಲನೆ ನೀಡಿದರು.
ಸುಳ್ಯ ತಾಲೂಕು ಜಂಯ್ಯತುಲ್ ಪಲಾಹ್ ಅಧ್ಯಕ್ಷ ಹಸೈನಾರ್ ಹಾಜಿ ಗೋರಡ್ಕ ,ಹಾಪಿಳ್ ಅಬ್ದುಲ್ ಸಲಾಂ ನಿಝಾಮಿ ಚೆನ್ನಾರ್,ಬಶೀರ್ ಸಖಾಫಿ ಕೊಲ್ಯಂ, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ರವರನ್ನು ಗೌವರಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಬೀರ್ ಜಟ್ಟಿಪಳ್ಳ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.