ಏಳು ಸಾವಿರ ಪಾವತಿಸಿದರೆ ಲಕ್ಷ ರೂ ಬರುತ್ತದೆ

0

 

ನಿಂತಿಕಲ್ಲಿನ ವ್ಯಕ್ತಿಯೋರ್ವರಿಗೆ ವಂಚನೆ

ಕೇವಲ ಏಳು ಸಾವಿರ ರೂಪಾಯಿ ಪಾವತಿಸಿದರೆ ಒಂದು ಲಕ್ಷ ದ ಇಪತ್ತು ಸಾವಿರ ರೂಪಾಯಿ ಸಿಗುವ ಮೋದಿಯವರ ಯೋಜನೆಯಿದೆ ಎಂದು ನಂಬಿಸಿ ನಿಂತಿಕಲ್ಲಿನ ವ್ಯಕ್ತಿಯೊಬ್ಬರು ವಂಚನೆಗೊಳಗಾದ ಘಟನೆ ಅ.18 ರಂದು ವರದಿಯಾಗಿದೆ.
ನಿಂತಿಕಲ್ಲಿನ ಇಸ್ಮಾಯಿಲ್ ಎಂಬವರ ಅಡಿಕೆ ವ್ಯಾಪಾರದ ಅಂಗಡಿಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಮೊದಲಿಗೆ ಅಡಿಕೆ ಧಾರಣೆ ಕೇಳಿದ.ಬಳಿಕ ಮೋದಿಯವರ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಬರುವ ಯೋಜನೆ ಇದೆ. ನಿಮಗೆ ಆ ಹಣ ಬಂದಿದೆಯಾ ಎಂದು ವಿಚಾರಿಸಿದ. “ನನಗೆ ಬಂದಿಲ್ಲ” ಎಂದು ಇಸ್ಮಾಯಿಲ್ ರು ಆತನಿಗೆ ತಿಳಿಸಿದರು. ಈ ವಿಚಾರ ಬ್ಯಾಂಕ್ ನವರಲ್ಲಿ ಮಾತನಾಡುತ್ತೇನೆ ಎಂದು ನಂಬಿಸಿ ಆತ ಫೋನ್ ಮಾಡಿ ಯಾರಲ್ಲೊ ಮಾತನಾಡಿ ನಾಟಕ ಮಾಡಿದ.
ನೀವು ಒಮ್ಮೆ ಬ್ಯಾಂಕ್ ಗೆ ಏಳು ಸಾವಿರ ಕಟ್ಟಲಿದೆ. ಬಳಿಕ ನಿಮಗೆ ಬರ ಬೇಕಾದ ಹಣದ ಚೆಕ್ ಕೊಡುತ್ತಾರೆ. ಎಂದು ಇಸ್ಮಾಯಿಲ್ ರವರಲ್ಲಿ ಹೇಳಿದ. ಆತನ ಮಾತನ್ನು ನಂಬಿ ಇಸ್ಮಾಯಿಲ್ ರು ಏಳು ಸಾವಿರ ನೀಡಿದರು. ಬ್ಯಾಂಕ್ ನಿಂದು ಈಗ ಚೆಕ್ ತರುತ್ತೇನೆ ಎಂದು ನಂಬಿಸಿ ಆತ ಅಲ್ಲಿಂದ ಬೈಕ್ ನಲ್ಲಿ ನಿಂತಿಕಲ್ಲು ಕಡೆ ಹೋಗಿದ್ದಾನೆ. ಬ್ಯಾಂಕ್ ಗೆ ಹೋದಾತ ಮತ್ತೆ ನಾಪತ್ತೆಯಾದರಿಂದ ಆತ ವಂಚಕ ಎಂಬುದು ಬೆಳಕಿಗೆ ಬಂತು. ಈ ಕುರಿತು ಬೆಳ್ಳಾರೆ ಪೋಲೀಸ್ ಠಾಣೆಗೆ ದೂರಲಾಗಿದೆ.ಆದರೆ ಈ ವರೆಗೆ ಆರೋಪಿ ಪತ್ತೆಯಾಗಿಲ್ಲ.

LEAVE A REPLY

Please enter your comment!
Please enter your name here