ತೋಟತ್ತಾಡಿ: ಕುತ್ರಿಜಾಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ

0

ಚಾರ್ಮಾಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಕುತ್ರಿಜಾಲು ಸಮೀಪ ನೆರಿಯ- ಧರ್ಮಸ್ಥಳ ಬ್ಲಾಕ್ ಅರಣ್ಯದ ರಸ್ತೆ ಬದಿ ಬೆಂಕಿ ಬಿದ್ದ ಘಟನೆ ಮೇ.4ರಂದು ಮಧ್ಯಾಹ್ನ ನಡೆದಿದೆ.

ಧೂಮಪಾನಿಗಳು ಬೀಡಿ, ಸಿಗರೇಟು ಸೇದಿ ಎಸೆದ ಪರಿಣಾಮ ಬೆಂಕಿ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳೀಯರು ತಕ್ಷಣ ಜಾಗೃತರಾಗಿ ಬೆಂಕಿ ಹತೋಟಿಗೆ ತಂದ ಕಾರಣ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿಲ್ಲ.

ಅರಣ್ಯದ ಒಳಗೆ ಬೆಂಕಿ ಪ್ರವೇಶಿಸುತ್ತಿದ್ದರೆ ಹೆಚ್ಚಿನ ಹಾನಿ ಉಂಟಾಗುವ ಸಾಧ್ಯತೆ ಇತ್ತು.

LEAVE A REPLY

Please enter your comment!
Please enter your name here