ವಾಯ್ಸ್ ಆಫ್ ಬಂಗಾಡಿ ಕಲಾವಿದರ ತಂಡದ “ಮಾಯೋದ ಶಕ್ತಿ” ಭಕ್ತಿ ಗೀತೆ ಬಿಡುಗಡೆ

0

ಬಂಗಾಡಿ:  ಕುತ್ರೊಟ್ಟೂ ಉಲ್ಲಾಯ ಉಳ್ಳಾಲ್ತಿ ಕ್ಷೇತ್ರದ ಮಹತ್ವನ್ನು ಸಾರುವ ಮಾಯೋದ ಶಕ್ತಿ ಎಂಬ ಭಕ್ತಿ ಗೀತೆ ವಾಯ್ಸ್ ಆಫ್ ಬಂಗಾಡಿ ಕಲಾವಿದರ ತಂಡದಿಂದ ನ.27ರಂದು ವೀರ ಭದ್ರ ದೇವಸ್ಥಾನದ ಸನ್ನಿಧಿಯಲ್ಲಿ ಬಿಡುಗಡೆ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಬಂಗಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರೇಮಾರವರು ವಾಯ್ಸ್ ಆಫ್ ಬಂಗಾಡಿ ಕಚೇರಿಯಲ್ಲಿ ಕಲಾಭಿಮಾನಿಗಳ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿಸಿದರು.

ಆಡಿಯೋ ವೀಡಿಯೋ ನಿರ್ದೇಶಕರಾದ  ನವೀನ್ ಕುಮಾರ್ ಬಂಗಾಡಿ, ಮತ್ತು  ಪಿ. ಅರ್ ಪಳನಿಸ್ವಾಮೀ,ಗಾಯಕಿ ಸುಶ್ಮಿತಾ ದೇವಾಡಿಗ ಬಂಗಾಡಿ, ಗ್ರಾಮ ಸಮಿತಿ ಸದಸ್ಯರಾದ  ವೀರಪ್ಪ ಮೊಯಿಲಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೀತೆಯ ಲೇಖಕ ಶಾಹೀನ್ ಅತ್ತಾಜೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ವಾಯ್ಸ್ ಆಫ್ ಬಂಗಾಡಿ ಗಾಯಕ ಇಸ್ಮಾಯಿಲ್ ಬಂಗಾಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here