ಬೆಳ್ತಂಗಡಿ:ವಾಣಿ ಪದವಿ ಪೂರ್ವ ಕಾಲೇಜಿ ನ ರೋವರ್ಸ್ ರೆಂಜಾರ್ಸ್ ಘಟಕ ದಿಂದ ಇಂದು ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು . *Effective communication* ಎಂಬ ವಿಷಯದ ಕುರಿತು ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಮತ್ತು ಜೆಸಿಐ ಭಾರತದ ವಲಯ ತರಬೇತುದಾರ ಶಂಕರ್ ರಾವ್ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಿ ಯದುಪತಿ ಗೌಡ ಇವರ ಮಾರ್ಗದರ್ಶನದಲ್ಲಿ, ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಬೆಳಿಯಪ್ಪ ಕೆ ಇವರ ಸ್ವಾಗತದೊಂದಿಗೆ ರೆಂಜರ್ ಲೀಡರ್ ಶ್ರೀಮತಿ ರಕ್ಷಾ ಇವರ ಉಪಸ್ಥಿತಿಯಲ್ಲಿ ಸುಮಾರು 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.