ಎಸ್.ಕೆ.ಎಸ್.ಎಸ್.ಎಫ್. ಪಡ್ಡಂದಡ್ಕ ಶಾಖೆಯಿಂದ ಉಚಿತ ಸಾಮೂಹಿಕ ಸುನ್ನತ್, ಹಿಜಾಮ ಶಿಬಿರ

0

ವೇಣೂರು: ಸಂಸ್ಥೆಯ 100ನೇ ವರ್ಷದ ವಾರ್ಷಿಕೋತ್ಸವ ಪ್ರಚಾರಾರ್ಥ ಪಡ್ಡoದಡ್ಕ ಎಸ್.ಕೆ.ಎಸ್.ಎಸ್.ಎಫ್. ಶಾಖೆಯಿಂದ ಉಚಿತ ಸಾಮೂಹಿಕ ಸುನ್ನತ್ ಮತ್ತು ಹಿಜಾಮ ಶಿಬಿರ ಸೆ. 28ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಪಿ.ಬಸೀರ್ ವಹಿಸಿದ್ದು, ನೂರುಲ್ ಹುದಾ ಮಸೀದಿ ಕತೀಬ್ ಬಹು. ಕಲಂದರ್ ಶಾಫಿ ಭಾಕವಿ ಅಲ್ ಮನ್ನಾನಿ ಉದ್ಘಾಟಿಸಿದರು. ಬಹು ಅಕ್ರಮ್ ಅಲಿ ತಂಗಲ್ ದುವಾ ಪ್ರಾರ್ಥನೆ ಮಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ, ಕಾರ್ಯದರ್ಶಿ ರಫೀಕ್ ಪಡ್ಡ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು, ಪ್ರಮುಖರಾದ ಜನಾಬ್ ಅಬ್ದು ರಝಕ್ ಮದನಿ , ಎಸ್.ಕೆ.ಎಸ್.ಎಸ್.ಎಫ್. ಮೂಡಬಿದ್ರಿ ವಲಯ ಅಧ್ಯಕ್ಷ, ಎಂ.ಎ.ಎಸ್. ಆಸೀಫ್ ತೋಡಾರು, ಅಜೀಜ್ ಮಾಲಿಕ್ ಮೂಡಬಿದ್ರಿ, ಅಶ್ರಫ್ ಮರೋಡಿ, ಯು.ಕೆ. ಇರ್ಫಾನ್ ಮೊಹಮ್ಮದ್, ಅಶ್ರಫ್ ಗಾಂಧಿ ನಗರ, ಅಶ್ರಫ್ ಕಿರೋಡಿ, ಇಕ್ಬಾಲ್ ಕುರ್ಲೊಟ್ಟು, ಬಸೀರ್ ಗಾಂಧಿನಗರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಎಸ್.ಕೆ.ಎಸ್.ಎಸ್.ಎಫ್. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇದ್ರಿಸ್ ಪುಲಬೆ ಸ್ವಾಗತಿಸಿದರು. ಸ್ವರೂಪ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here