ಕನ್ಯಾಡಿ: ಆದಿಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಸ್ಥಾನದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಜೂ. 29ರಂದು ನಡೆದ ತಪೋವನ ನಿರ್ಮಾಣ ಕಾರ್ಯದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ವಿವಿಧ ರೀತಿಯ ಹಣ್ಣುಗಳ ಸಸಿಗಳನ್ನು ನೆಡಲಾಯಿತು.

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಘಟಕದ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ, ಹರೀಶ್ ಸುವರ್ಣ ಕನ್ಯಾಡಿ, ಎಂ. ಕೆ. ಪ್ರಸಾದ್, ಸದಾಶಿವ ಪೂಜಾರಿ ಊರ, ಕಾರ್ಯಕ್ರಮ ಸಂಚಾಲಕ ಸುನಿಲ್ ಕನ್ಯಾಡಿ, ಘಟಕದ ಉಪಾಧ್ಯಕ್ಷ ಸಂತೋಷ್ ಅರಳಿ, ಕಾರ್ಯದರ್ಶಿ ಮಧುರ ರಾಘವ್, ಕೋಶಾಧಿಕಾರಿ ನಾಗೇಶ್ ಅದೇಲು, ನಿರ್ದೇಶಕರಾದ ಅಶೋಕ್ ಕಲ್ಮಂಜ, ಸುದರ್ಶನ್ ಬಂಗೇರ, ಯೋಗೀಶ್ ಕಳಿಯ, ಸಲಹೆಗಾರರಾದ ಮನೋಹರ್ ಬಳಂಜ, ಜಾರಪ್ಪ ಪೂಜಾರಿ ಬೆಳಾಲು, ರೂಪೇಶ್ ಧರ್ಮಸ್ಥಳ, ಸಂತೋಷ್ ಕೆ.ಸಿ. ಹಾಗೂ ಯುವವಾಹಿನಿ ಸದಸ್ಯರು ಭಾಗವಹಿಸಿದ್ದರು.