ಸುಲ್ಕೇರಿ:ಅ.ಖಾ.ಹಿ.ಪ್ರಾ.ಶಾಲೆ, ಶ್ರೀರಾಮ ಹಿ. ಪ್ರಾ. ಶಾಲೆ, ಪ್ರೌ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

0

ಸುಲ್ಕೇರಿ: ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಸುಕ್ಕೇರಿ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಸುಕ್ಕೇರಿ, ಶ್ರೀರಾಮ ಪ್ರೌಢಶಾಲೆ ಸುಕ್ಕೇರಿಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗಿನ 670 ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಿಗೆ ಸುಮಾರು ಅಂದಾಜು ರೂ.3.5 ಲಕ್ಷ ವೆಚ್ಚದ ಉಚಿತ ಬರೆಯುವ ಪುಸ್ತಕವನ್ನು ನೀಡಿರುವ ಪುಷ್ಪಗಿರಿ ಶ್ರೀದೇವಿ ನೆರವಿನ ನೆರಳು ಸೇವಾ ಪ್ರತಿಷ್ಠಾನ ಉರುವಾಲು ಬೆಳ್ತಂಗಡಿ ಅಧ್ಯಕ್ಷ, ಸಮಾಜ ಸೇವಕ, ಬೆಂಗಳೂರಿನ ಉದ್ಯಮಿ ಕಿರಣ್‌ಚಂದ್ರ ಡಿ. ಪುಷ್ಪಗಿರಿ ಉರುವಾಲು ಮತ್ತು ಆರ್. ದೇವರಾಯ ಪ್ರಭು ಜನಬಿಂಬ ಪತ್ರಿಕೆಯ ಸಂಪಾದಕ, ಹೊಸ ಸಂಜೆ ಬಳಗದ ಅಧ್ಯಕ್ಷರು, ಸಮಾಜ ಸೇವಕರು ಇವರು ವಿದ್ಯಾರ್ಥಿಗಳಿಗೆ ಪುಸ್ತಕ ಹಸ್ತಾಂತರಿಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಗಣೇಶ್‌ ಹೆಗ್ಡೆ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜು ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಕಾರ್ಕಳ ಸಂಚಾಲಕ ಪ್ರಶಾಂತ್ ಆಚಾರ್ಯ, ಕಣಿಯೂರು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಗೌಡ, ದಿಡುಪೆ ಪ್ರಗತಿಪರ ಕೃಷಿಕ ಜಗದೀಶ್ ಗೌಡ, ಕಣಿಯೂರು ಪ್ರಗತಿಪರ ಕೃಷಿಕ ಭರತ್ ಗೌಡ ಭಾಗಿಯಾಗಿದ್ದರು. ಗೌರವಾಧ್ಯಕ್ಷ ಗಣೇಶ್‌ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶಿಕ್ಷಕ ಸತೀಶ್ ಕುಮಾರ್ ಎನ್. ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು. ಶ್ರೀರಾಮ ಪ್ರೌಢ ಶಾಲಾ ಮುಖ್ಯಗುರು ಪ್ರಮೋದ್ ಕುಮಾ‌ರ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here