ಬಕ್ರೀದ್ ಹಬ್ಬದ ನಿಮಿತ್ತ ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಸಮಿತಿ ಸಭೆ

0

ವೇಣೂರು: ಬಕ್ರೀದ್ ಹಬ್ಬದ ನಿಮಿತ್ತ ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಸಮಿತಿ ಸಭೆ ಜರಗಿತು. ಶಾಂತಿ ಸಮಿತಿ ಸಭೆಯಲ್ಲಿ ಠಾಣಾಧಿಕಾರಿ ಶ್ರೀಶೈಲ ಮುರಗೋಡ್ ಹಬ್ಬ ಆಚರಣೆಯ ಬಗ್ಗೆ ಸರಕಾರದ ಮಾರ್ಗಸೂಚಿಗಳ ಮಾಹಿತಿಯನ್ನು ನೀಡಿ ಎಲ್ಲರ ಸಹಕಾರ ಕೋರಿ ವಿಚಾರ ವಿನಿಮಯ ನಡೆಸಿದರು. ಸಭೆಯಲ್ಲಿ ಪಿ.ಎಸ್.ಐ ಆನಂದ್, ಠಾಣಾ ವ್ಯಾಪ್ತಿಯ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ಠಾಣಾ ವ್ಯಾಪ್ತಿಯ ಮಸೀದಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಅಲ್ಲದೆ ಗಣ್ಯರು, ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here