ಗೆಜ್ಜೆಗಿರಿಯಲ್ಲಿ ಮಾಯಾ ಜುಮಾದಿ ಯಕ್ಷಗಾನದ ಟೈಟಲ್ ಬಿಡುಗಡೆ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮೇ. 25ರಂದು ಮಾಯಾ ಜುಮಾದಿ ಪ್ರಸಂಗದ ಟೈಟಲ್ ಬಿಡುಗಡೆಯನ್ನು ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲುಂಬಿ, ಗೌರವಾಧ್ಯಕ್ಷ ಜಯಂತ್ ನಡುಬೈಲ್ ರವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಇದೊಂದು ಬಾಲೆ ಮಾಣಿ ಮಾಯಂದಾಲ್ ಪಾರ್ದನ ಆಧಾರಿತ ಸತ್ಯ ಕಥೆ 2025 – 26ನೇ ಸಾಲಿನ ತಿರುಗಾಟದಲ್ಲಿ ಸಂಚಲನ ಮೂಡಿಸಲಿದೆ ಎಂದು ಕ್ಷೇತ್ರದ ಯಕ್ಷಗಾನ ಮೇಳದ ಪ್ರಧಾನ ಸಂಚಾಲಕ ಪ್ರಶಾಂತ್ ಪೂಜಾರಿ ಮಸ್ಕತ್ ತಿಳಿಸಿದರು. ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್, ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರ್, ಜೊತೆ ಕಾರ್ಯದರ್ಶಿ ಜಯವಿಕ್ರಂ ಕಲ್ಲಾಪು, ಸುಜಿತಾ ವಿ. ಬಂಗೇರ, ಪ್ರಮಲ್ ಕುಮಾರ್ ಕಾರ್ಕಳ, ಸಂಜೀವ ಪೂಜಾರಿ ಬಿರುವ ಸೆಂಟರ್, ನವೀನ್ ಸುವರ್ಣ ಸಜೀಪ, ಡಾ. ಸಂತೋಷ್ ಪರಂಪಲ್ಲಿ ಉಡುಪಿ, ಹರೀಶ್ ಕೆ. ಪೂಜಾರಿ, ನಾರಾಯಣ ಮಚ್ಚಿನ, ಕಾನೂನು ಸಲಹೆಗಾರ ನವನೀತ್ ಡಿ. ಹಿಂಗಾಣಿ, ಹರೀಶ್ ವಿ. ಪಚನಾಡಿ, ನಿತ್ಯಾನಂದ ನಾವರ, ಜಯರಾಮ ಬಂಗೇರ, ನಾಗೇಶ್ ಪೂಜಾರಿ, ಶಾಂಭವಿ ಬಂಗೇರ, ದೀಪಕ್ ಸಜೀಪ, ಹಾಗೂ ಇತರ ಗಣ್ಯರು ಹಾಜರಿದ್ದರು. 2024-2025ರ ಕೊನೆಯ ತಿರುಗಾಟದ ದೇವರ ಸೇವೆ ಆಟ ಗಿರಿಜಾ ಕಲ್ಯಾಣ ಯಕ್ಷಗಾನ ಪ್ರಸಂಗ ನಡೆಯಿತು.

LEAVE A REPLY

Please enter your comment!
Please enter your name here