ನೆಲ್ಯಾಡಿ: ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ದಿವ್ಯ ಬಾಲರ ವಿಜೃಂಭಣೆಯ ಪವಿತ್ರ ಪರಮ ಪ್ರಸಾದ ಸ್ವೀಕರಣಾ ಕಾರ್ಯಕ್ರಮ ಜರುಗಿತು.

ಹತ್ತು ಮಕ್ಕಳು ಹತ್ತು ದಿನಗಳಿಂದ ಪ್ರಾರ್ಥನೆ ಮತ್ತು ತರಬೇತಿಯ ಮುಖಾಂತರ ಈ ಧಾರ್ಮಿಕ ವಿಧಿಗೆ ಸಿದ್ಧತೆ ಮಾಡಿ ಕೊಂಡಿದ್ದರು. ಪುಣ್ಯ ಕ್ಷೇತ್ರದ ಫಾ. ಶಾಜಿ ಮಾತ್ಯು, ಫಾ. ಆಗಸ್ಟಿನ್ ಪೊಟ್ಟಮ್ ಕುಳಂಗರ, ಕಂಕನಾಡಿ ಫಾ. ಕುರಿಯಾಸ್, ಜಗದಲ್ಪುರ್, ಫಾ.ಶಾಜನ್ ಎಂಬ್ರಾಂಡಿ ವಯಲಿಲ್ ಮೈಸೂರ್, ಫಾ. ಸೇಬಾಷ್ಟಿಯನ್ ಪುನ್ನತಾನಮ್ ಬೋಲ್ಮಿ ನಾರ್, ಕೊಕ್ಕಡದ ಫಾ. ಜಿಬಿನ್, ಫಾ ಅಲೆಕ್ಸ್ ಉಪಸ್ಥಿತರಿದ್ದರು. ಸಿಸ್ಟರ್. ಎಲ್ ಸ್ಲಿಟ್, ಸಿ. ಆಲ್ಫಿ, ಪ್ರಸ್ಟಿನ ರೊಯ್, ರೊಯ್ ಕೊಳಂಗರಾತ್ತ್ ತರಬೇತಿ ನೀಡಿದರು.