ಗುರುವಾಯನಕೆರೆ: ಶ್ರೀ ಹಿತ ಡೆಂಟಲ್ ಝೋನ್ ಶುಭಾರಂಭ

0

ಗುರುವಾಯನಕೆರೆ: ಹೊಟೇಲ್ ರೇಸ್ ಇನ್ ಜಂಕ್ಷನ್ ಹತ್ತಿರ ನೂತನವಾಗಿ ನಿರ್ಮಾಣವಾದ ಡಾ.ಸವನ್ ರೈ ಬಾರ್ದಡ್ಕ ಬಳಂಜ ಅವರ ಶ್ರೀ ಹಿತ ಡೆಂಟಲ್ ಝೋನ್ ಅ.11ರಂದು ಶುಭಾರಂಭಗೊಂಡಿತು.

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಜಯರಾಮ್ ಶೆಟ್ಟಿ ನೂತನ‌ ಡೆಂಟಲ್ ಕ್ಲಿನಿಕ್ ನ್ನು ಉದ್ಘಾಟಿಸಿ ಶುಭಕೋರಿದರು. ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಸಹಕಾರ ರತ್ನ ದಂಬೆಕಾನ ಸದಾಶಿವ ರೈ ದೀಪ ಪ್ರಜ್ವಲಿಸಿ ಶುಭಕೋರಿದರು‌.

ಈ ಸಂದರ್ಭದಲ್ಲಿ ವಾಣಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀ ನಾರಾಯಣ, ಪ್ರಗತಿಪರ ಕೃಷಿಕರಾದ ಸಂತೋಷ್ ಕುಮಾರ್ ಕಾಪಿನಡ್ಕ, ಗಂಗಾಧರ ಮಿತ್ತಮಾರ್, ಅಳದಂಗಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ರೈ, ಹರೀಶ್ ರೈ ಬಾರ್ದಡ್ಕ, ನಿವೃತ ಬ್ಯಾಂಕ್ ಉದ್ಯೋಗಿ ನಾರಾಯಣ ರೈ, ಬಳಂಜ ಬದಿನಡೆ ಕ್ಷೇತ್ರದ ಧರ್ಮದರ್ಶಿ ಜಯ ಸಾಲಿಯಾನ್, ಪ್ರಮುಖರಾದ ಸುರೇಶ್ ಶೆಟ್ಟಿ ಕುರೆಲ್ಯ, ತಿಮ್ಮಪ್ಪ ಪೂಜಾರಿ ತಾರಿಪಡ್ಪು, ವಸಂತ ಮಜಲು, ರಮಾನಾಥ ಶೆಟ್ಟಿ ಪಂಬಾಜೆ, ಎಜೆ ಆಸ್ಪತ್ರೆಯ ಡಾ.ಸೌರಾಬ್, ಹೆಚ್.ಪಿ ಕಂಪೆನಿ ಉದ್ಯೋಗಿ ತುಷಾರ್ ರೈ ಬೆಂಗಳೂರು, ದೇರಳಕಟ್ಟೆ ಆಸ್ಪತ್ರೆಯ ಸಾತ್ವಿಕ್ ರೈ, ಯೋಗೀಶ್ ಕುಮಾರ್ ನಡಕ್ಕರ, ಜೇಸಿ ಅಧ್ಯಕ್ಷ ರಂಜಿತ್, ನಿಸರ್ಗ ಕವನ್ಸ್ ಮಾಲಕ ನಾಗೇಶ ಬರಾಯ, ಕೃಷಿಕರಾದ ರಾಧಾಕೃಷ್ಣ ರೈ, ಉದ್ಯಮಿ ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ ಹಂಕರ್ಜಾಲು, ವೈಭವ್ ಸಂತೋಷ್ ಶೆಟ್ಟಿ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಊರವರು, ಬಂಧು ಮಿತ್ರರು ಉಪಸ್ಥಿತರಿದ್ದರು.

ಆಗಮಿಸಿದ ಅತಿಥಿ ಗಣ್ಯರನ್ನು ಪ್ರಗತಿಪರ ಕೃಷಿಕ, ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ ಮತ್ತು ಸುಖ ಸತೀಶ್ ರೈ, ಡಾ. ಸವನ್ ರೈ, ಸಂಹಿತ ರೈ ಬಾರ್ದಡ್ಕ ಸ್ವಾಗತಿಸಿ, ಸತ್ಕರಿಸಿದರು.

LEAVE A REPLY

Please enter your comment!
Please enter your name here