ಅನಾರೋಗ್ಯದಿಂದ ಬಳಲುತ್ತಿದ್ದ ಕುಪ್ಪೆಟ್ಟಿಯ ಶ್ರಾವ್ಯಾ ನಿಧನ

0

ಬೆಳ್ತಂಗಡಿ: ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿ ಸಮೀಪದ ಕಾರ್ಯಡ್ಕ ಎಂಬಲ್ಲಿನ ಶ್ರಾವ್ಯಾ ಜೆ.ಎಂ.(23)ಕ್ಯಾನ್ಸರ್ (ಗರ್ಭಕಂಠದ ಇವಿಂಗ್ಸ್ ಸಾರ್ಕೊಮ) ರೋಗದಿಂದ ಬಳಲುತ್ತಿದ್ದು, ಅ.11ರಂದು ಮನೆಯಲ್ಲಿ ನಿಧನರಾದರು.

ಕೆಲದಿನಗಳಿಂದ ಮಂಗಳೂರಿನ ಎಂ.ಐ.ಒ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಹೆಚ್ಚಿನ ಚಿಕಿತ್ಸೆಗಾಗಿ 3 ಲಕ್ಷ ರೂ. ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದ ಮೇರೆಗೆ, ಬಡಕುಟುಂಬಕ್ಕೆ ನೆರವಾಗಲು ಸ್ಥಳೀಯರು ವಾಟ್ಸಾಪ್ ಗ್ರೂಪ್ ರಚಿಸಿ ಶ್ರಾವ್ಯಾರ ಚಿಕಿತ್ಸೆಗೆ ನೆರವಾಗಲು ವಿನಂತಿಸಿದ್ದರು.

ಮೃತರು ತಂದೆ ಜನಾರ್ದನ ಪೂಜಾರಿ, ತಾಯಿ ರೇವತಿ ಹಾಗೂ ತಂಗಿ ಶ್ರೇಯಾ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here