ಶ್ರೀರಾಮ ಕ್ಷೇತ್ರದ ಪೀಠಾಧೀಶ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ ಸಮಾರೋಪ ಸಮಾರಂಭ- ಸೀಮೋಲ್ಲಂಘನ

0

ಬೆಳ್ತಂಗಡಿ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಜು.21 ಗುರು ಪೌರ್ಣಮಿಯಿಂದ ಆ.30ರವರೆಗೆ ಭಟ್ಕಳ ಕರಿಕಲ್ ಧ್ಯಾನಮಂದಿರದಲ್ಲಿ ಹಮ್ಮಿಕೊಂಡಿದ್ದ ಚಾತುರ್ಮಾಸ್ಯ ವೃತಾಚರಣೆಯ ಸಮಾರೋಪ ಸಮಾರಂಭ ಆ.30ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ವಿದ್ಯಾನಂದ ಸರಸ್ವತಿ ಮಹಾರಾಜ್, ಪಂಚ ದಶನಾಮ ಜುನಾ ಅಖಾಡದ ಅಂತರಾಷ್ಟ್ರೀಯ ಉಪಾಧ್ಯಕ್ಷರು, ಟಾಟಾ ನಗರ, ಜಾರ್ಖಂಡ್ ಶ್ರೀ ವಿದ್ಯಾನಂದ ಸರಸ್ವತಿ ಮಹಾರಾಜ್,
ಪಂಚದಶನಾಮ ಜುನಾ ಅಖಾಡದ ನಿಕಟಪೂರ್ವ ಮಹಾಮಂತ್ರಿ, ಹರಿದ್ವಾರದ ಶ್ರೀ ದೇವಾನಂದ ಸರಸ್ವತಿ ಮಹಾರಾಜ್, ಪಂಚದಶನಾಮ ಜುನಾ ಅಖಾಡ, ಟಾಟಾ ನಗರದ ಶ್ರೀ ಇಂದ್ರಾನಂದ ಸರಸ್ವತಿ ಮಹಾರಾಜ್, ಅಯೋದ್ಯೆಯ ಶ್ರೀ ಕೇಶವಾನಂದ ಸರಸ್ವತಿ ಸ್ವಾಮೀಜಿ, ಕರ್ನಾಟಕ ಸರಕಾರದ ಬಂದರು ಮತ್ತು ಮೀನುಗರಿಕಾ ಸಚಿವ ಮಾಂಕಾಳ್ ವೈದ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಾಜಿ ಸಚಿವ ಗುಲ್ಬರ್ಗದ ಮಲೀಕಯ್ಯ ಗುತ್ತೇದಾರ್, ಭಟ್ಕಳದ ಮಾಜಿ ಶಾಸಕ ಸುನಿಲ್ ಬಿ.ನಾಯ್ಕ್, ದೆಹಲಿಯ ಉದ್ಯಮಿ ರಾಕೇಶ್ ಸಿಂಗ್, ಭಾಗವಹಿಸಿದ್ದರು. ನಾಮಧಾರಿ ಸಂಘದ ಅಧ್ಯಕ್ಷ ಅರುಣ್ ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ.ನಾಯ್ಕ, ಕೃಷ್ಣ ನಾಯ್ಕ ಶಿರಾಲಿ, ಸುಬ್ರಾಯ ನಾಯ್ಕ, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮೊದಲು ಸೀಮೋಲ್ಲಂಘನ ನಡೆದು ಸ್ವಾಮೀಜಿಯವರು ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಆಗಮಿಸಿದರು.

ಈ ದಿನದ ಕೊನೆಯ ಚಾತುರ್ಮಾಸ್ಯ ಸಂದರ್ಭದಲ್ಲಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಮಂಗಳೂರು ಶಾಸಕ ಭರತ್ ಶೆಟ್ಟಿ, ಇತರ ಗಣ್ಯರು, ಭಕ್ತರು ಆಗಮಿಸಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದುಕೊಂಡರು.

LEAVE A REPLY

Please enter your comment!
Please enter your name here