ಉಜಿರೆಯ ಮುಂಡತ್ತೋಡಿ ತಿರುವು ಬಳಿ ರಸ್ತೆಯಲ್ಲೇ ಹಾದು ಹೋಗಿರುವ ಕೇಬಲ್- ಪಾದಚಾರಿಗಳಿಗೆ ತೊಂದರೆ

0

ಉಜಿರೆ: ಇಲ್ಲಿನ ಕಾಲೇಜು ರಸ್ತೆಯಿಂದ ಮುಂಡತ್ತೋಡಿ-ಪೆರ್ಲ ಕಡೆಗೆ ಹೋಗುವ ತಿರುಗುವಲ್ಲಿ ರಸ್ತೆಗೆ ಅಡ್ಡಲಾಗಿ ಬಹು ದಿನಗಳಿಂದ ಕೇಬಲ್ ವೈಯರ್ ಹಾದುಹೋಗಿದ್ದು. ಇದು ಪಾದಚಾರಿಗಳಿಗೆ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತೊಂದರೆಯುಂಟು ಮಾಡಿದೆ.

ಈಗಾಗಲೇ ಕೆಲ ವಿದ್ಯಾರ್ಥಿಗಳು ಕೇಬಲ್ ಕಾಲಿಗೆ ಸಿಲುಕಿ ಬಿದ್ದಿದ್ದಾರೆಂದು ಸಾರ್ವಜನಿಕರು ತಿಳಿಸಿದ್ದಾರೆ. ಕೂಡಲೇ ಸಂಬಂಧಪಟ್ಟವರು ಈ ಕೇಬಲ್ ತೆರವುಗೊಳಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here