ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಸಂತ ಅಲ್ಫೋನ್ಸ ಮಹೋತ್ಸವದ ಪ್ರಯುಕ್ತ ಧರ್ಮಾಧ್ಯಕ್ಷರಿಂದ ಪೂಜಾರ್ಪಣೆ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ನವ ದಿನಗಳ ವಿಶೇಷ ಸಂತ ಅಲ್ಫೋನ್ಸ ಮಹೋತ್ಸವದಲ್ಲಿ ಬೆಳ್ತಂಗಡಿ ಧರ್ಮಾಧ್ಯಕ್ಷ ಮಾರ್ ಲಾರೆನ್ಸ್ ಮುಕ್ಕುಯಿ ಅವರು ಜು.21ರಂದು ಭಕ್ತರ ವಿವಿದ ಬೇಡಿಕೆ ಹರಕೆ ಗಳಿಗಾಗಿ ಬಲಿ ಪೂಜೆಯನ್ನು ಅರ್ಪಿಸಿ ಪ್ರಾರ್ಥಿಸಿದರು.

ತಮ್ಮ ಸಂದೇಶದಲ್ಲಿ ಸಂತ ಅಲ್ಫೋನ್ಸ ತಮ್ಮ ಸಹನೆ, ತ್ಯಾಗ ಮತ್ತು ಸೇವೆಯ ಬದುಕಿನ ಮೂಲಕ ಇಂದಿನ ಜಗತ್ತಿನ ಖಿನ್ನತೆ ಆತಂಕ, ಉದ್ವೇಗ ಮತ್ತು ಭಯದ ವಾತಾವರಣ ಮದ್ಯೆ ಬದುಕುವ ಜನರಿಗೆ ಭರವಸೆಯ ಬೆಳಕನ್ನು ಜಗಕ್ಕೆ ಚೆಲ್ಲಿದ ಚೇತನವಾಗಿತ್ತು ಎಂದು ತಿಳಿಸಿದರು.

ಧರ್ಮಾಧ್ಯಕ್ಷರನ್ನು ಸಂತ ಅಲ್ಫೋನ್ಸ, ಸೆಂಟ್ ಮೇರಿಸ್ ಆರ್ಲ ಹಾಗೂ ಲಿಟಿಲ್ ಫ್ಲವರ್ ಇಚ್ಚಿಲಂಪಾಡಿ ಚರ್ಚ್ ನ ಟ್ರಸ್ಟಿ ಗಳಾದ ಅಲೆಕ್ಸ್, ಶಿಬು, ಅಲ್ಬಿನ್, ಜೋಬಿನ್, ಸಂತೋಷ್, ವಿನೋದ್, ಬಾಬು ಬಿಜು ಸೇರಿ ಸ್ವಾಗತಿಸಿದರು.

ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು, ವಂದನಿಯ ಫಾ.ಲಾರೆನ್ಸ್ ಪೂಣೋಲಿಲ್, ಫಾ ಅರುಣ್, ಫಾ.ಜಿಬಿನ್, ಫಾ.ಸಾನು, ಫಾ.ಎಬಿನ್ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here