ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಮನ, ಧರ್ಮಾಧಿಕಾರಿಗಳ ಭೇಟಿ: ಕಾರ್ಯಕರ್ತರು, ಮುಖಂಡರ ಸನ್ಮಾನ ಸ್ವೀಕಾರ

0

ಧರ್ಮಸ್ಥಳ: ರಾಜ್ಯದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಬಿ ಎಸ್ ಯಡಿಯೂರಪ್ಪ ಇಂದು ಜೂನ್ 23ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಧರ್ಮಾಧಿಕಾರಿ‌ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿ: ಕ್ಷೇತ್ರಕ್ಕೆ ಆಗಮಿಸಿರುವ ಬಿ ಎಸ್ ಯಡಿಯೂರಪ್ಪನವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಿಜೆಪಿ ಮುಖಂಡರು ,ಕಾರ್ಯಕರ್ತರಿಂದ ಸನ್ಮಾನ ಸ್ವೀಕಾರಶ್ರೀ ಕ್ಷೇತ್ರದ ವಸತಿಗೃಹದಲ್ಲಿ ತಂಗಿರುವ ಯಡಿಯೂರಪ್ಪರನ್ನು ಬಿಜೆಪಿ ಪಕ್ಷದ ಪ್ರಮುಖರು, ಮುಖಂಡರು, ಕಾರ್ಯಕರ್ತರು ಭೇಟಿಯಾಗಿ ಸನ್ಮಾನಿಸಿದರು.

ಈ ವೇಳೆ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬೆಳ್ತಂಗಡಿ ಮಂಡಲಾಧ್ಯಕ್ಷ ಶ್ರೀನಿವಾಸ್ ರಾವ್, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಯಶವಂತ್ ಪುದುವೆಟ್ಟು, ದಿನೇಶ್ ಧರ್ಮಸ್ಥಳ, ಚಂದ್ರಶೇಖರ್, ಹರಿಪ್ರಸಾದ್ ಕಡಮ್ಮಾಜೆ, ಪ್ರೀತಮ್ ಧರ್ಮಸ್ಥಳ, ರತ್ನವರ್ಮ ಜೈನ್, ಸೀತಾರಾಮ್ ಬೆಳಾಲ್,ಹರೀಶ್ ಕೊಯಿಲ, ವಿಕ್ರಂ, ಕೊರಗಪ್ಪ ನಾಯ್ಕ್, ಗಿರೀಶ್ ಬಿ ಕೆ, ಚೆನ್ನಕೇಶವ, ಕೊರಗಪ್ಪ ಗೌಡ, ಧನಲಕ್ಷ್ಮೀ ಜನಾರ್ಧನ್, ವಿದ್ಯಾ ಶ್ರೀನಿವಾಸ್ ಗೌಡ, ದಿನೇಶ್ ಚಾರ್ಮಾಡಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here