ಬಂಟರ ಗ್ರಾಮ ಸಮಿತಿ ಮುಂಡಾಜೆ ಮಾಸಿಕ ಸಭೆ: ಯಕ್ಷಗಾನ ತಾಳಮದ್ದಳೆ

0

ಮುಂಡಾಜೆ: ಬಂಟರ ಗ್ರಾಮ ಸಮಿತಿ ಮುಂಡಾಜೆ ಇದರ ಮಾಸಿಕ ಸಭೆಯು ನ.12ರಂದು ಮುಂಡಾಜೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಗ್ರಾಮ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ, ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಗ್ರಿ, ಕಾರ್ಯದರ್ಶಿ ವಿಜಯಕುಮಾರ್ ರೈ, ಸ್ಥಳೀಯ ಪ್ರತಿನಿಧಿಗಳಾದ ಪ್ರದೀಪ್ ಕುಮಾರ್ ಶೆಟ್ಟಿ ನಾಗಂಡ, ವಿನಾಯಕ ಶೆಟ್ಟಿ ಅಗರಿ, ನವೀತ್ ಶೆಟ್ಟಿ ನೆಯಾಲು, ಯಕ್ಷಗಾನ ಕಲಾವಿದ ನವೀನ್ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು.

ಸುಮಾ ಶೆಟ್ಟಿ ಇವರು ಪ್ರಾರ್ಥಿಸಿ ನವೀತ್ ಶೆಟ್ಟಿ ಇವರು ನಿರೂಪಿಸಿದರು.ವಿಶೇಷವಾಗಿ ದೀಪಾವಳಿ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ, ಸಮಿತಿ ಒಳಗಿನ ಸದಸ್ಯರಿಂದ ನಡೆಯಿತು.ಹಿಮ್ಮೇಳದಲ್ಲಿ ಪುರುಷೋತ್ತಮ ಶೆಟ್ಟಿ ಅಗರಿ, ನಾರಾಯಣ ಶೆಟ್ಟಿ ಮಂಜುಶ್ರೀ ನಗರ, ಪುರಂದರ ಧರ್ಮಸ್ಥಳ, ಹರೀಶ್ ಕುಮಾರ್ ಚಾರ್ಮಾಡಿ ಹಾಗೂ ಮುಮ್ಮೇಳದಲ್ಲಿ ನವೀನ್ ಶೆಟ್ಟಿ ಬತ್ರಬೈಲು, ಚಿತ್ರಿತಾ ನವೀನ್ ಶೆಟ್ಟಿ ಬತ್ರಬೈಲು , ನವೀತ್ ಶೆಟ್ಟಿ ನೆಯ್ಯಾಲು, ಹರ್ಷಿತ್ ಶೆಟ್ಟಿ ನೆಯ್ಯಾಲು ಇವರುಗಳು ಸಹಕರಿಸಿದರು.

ಗ್ರಾಮ ಸಮಿತಿಯ ಒಳಗಿನ ಕಲಾವಿದರೇ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನೆರವೇರಿಸಿ ಕೊಟ್ಟದ್ದನ್ನು ಎಲ್ಲರೂ ಅಭಿನಂದಿಸಿದರು.

LEAVE A REPLY

Please enter your comment!
Please enter your name here