ಗೇರುಕಟ್ಟೆ ಶಕ್ತಿ ಯುವಕ ಮಂಡಲ ಮತ್ತು ದಾನಿಗಳ ಸಹಕಾರದಿಂದ ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

0

ಗೇರುಕಟ್ಟೆ: ಶಕ್ತಿ ಯುವಕ ಮಂಡಲ ಇದರ ರಜತ ಮಹೋತ್ಸವದ ಪ್ರಯುಕ್ತ ಮತ್ತು ಮಹಾದಾನಿಗಳ ಸಹಕಾರದೊಂದಿಗೆ ಬಡ ಕುಟುಂಬದ ಚೆನ್ನರ ಪತ್ನಿ ಸೀತಾ ಇವರಿಗೆ ಮನೆ ನಿರ್ಮಿಸಿಕೊಡುವ ಮಹಾಕಾರ್ಯದ ಭೂಮಿ ಪೂಜೆ ಅ.24 ರಂದು ನಡುಮನೆ ಶ್ರೀನಿವಾಸ ಪುರೋಹಿತರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರದಲ್ಲಿ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಪೂಜಾರಿ ಭಾಗವಹಿಸಿ ಶುಭ ಹಾರೈಸಿದರು.ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಮೂಲ್ಯ, ಶಕ್ತಿ ಯುವಕ ಮಂಡಲದ ಅಧ್ಯಕ್ಷರ ಉಮೇಶ್ ಕುಲಾಲ್, ಪ್ರಧಾನ ಕಾರ್ಯದರ್ಶಿ ತಾರಾನಾಥ ನಾಯ್ಕ್, ಕಾರ್ಯದರ್ಶಿ ಸಂತೋಷ ಭಾರ್ಗವಿ, ಕ್ರೀಡೆ ಕಾರ್ಯದರ್ಶಿ ಸುದೇಶ್ ಆರ್.ಗೌಡ, ಮಾಧ್ಯಮ ಕಾರ್ಯದರ್ಶಿ ಸತೀಶ್ ಸಾಲಿಯಾನ್, ಸಾಂಸ್ಕೃತಿಕ ಕಾರ್ಯದರ್ಶಿ ಯೋಗೀಶ್ ಕುಮಾರ್, ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ದೇವಣ್ಣ ಮೂಲ್ಯ, ಕಳಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಸಿರಿಲ್ ಪಿಂಟೋ, ಹಾಗೂ ಶಕ್ತಿ ಯುವಕಮಂಡಲದ ಪದಾಧಿಕಾರಿಗಳು, ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here