ಶಿಬರಾಜೆ ಪಾದೆ ಗ್ರಾಮಭ್ಯಯ ಕಾರ್ಯಕ್ರಮ ಅನುಷ್ಠಾನ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

0

ಶಿಬರಾಜೆ: ಗ್ರಾಮಭ್ಯಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದ ಉದ್ಘಾಟನೆಯನ್ನು ಯುವರಾಜ್ ಪೂವಣಿ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಎಸ್ ಡಿ ಎಮ್ ವಿದ್ಯಾಸಂಸ್ಥೆಗಳು ಉಜಿರೆ ಇವರು ಉದ್ಘಾಟಿಸಿ ಮುಂದೆ ನಡೆಯುವ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ತದನಂತರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪಿ.ಟಿ ಸಬಾಷ್ಟಿನ್ ಅಲಂಕರಿಸಿದರು.ಮುಖ್ಯ ಅತಿಥಿಗಳಾಗಿ ವಿಶ್ವನಾಥ ಗೌಡ ಹಾರಿತ್ತಕಜೆ ಮತ್ತು ಗಣೇಶ್ ಕುಂದರ್ ಉಪಸ್ಥಿತರಿದ್ದರು.ಹಾಗೂ ಸಭೆಯಲ್ಲಿ ವಿಶೇಷವಾಗಿ ಸನ್ಮಾನಿತಗೊಂಡ ಕೆ.ಮಹಾಬಲ ನಿವೃತ ಸುಬೇದಾರ್ ಮತ್ತು ಲಕ್ಷ್ಮೀಪತಿ ಪಿ. ಟಿ ಸಹಶಿಕ್ಷಕರು ಶಾಲೆತ್ತಡ್ಕ ಪ್ರೌಢಶಾಲೆ ಇವರು ಉಪಸ್ಥಿತರಿದ್ದರು.

ಗೌರವಾಧ್ಯಕ್ಷರಾದ ಟಿ.ಎಸ್ ನಿತ್ಯಾನಂದ ರೈ ರವರು ಉಪಸ್ಥಿತರಿದ್ದು, ಕವಿತಾ ಕುಕ್ಕಾಜೆ ಸ್ವಾಗತಿಸಿ, ಕಾರ್ಯದರ್ಶಿ ಕೆ.ರಾಜೇಶ್ ಶೆಟ್ಟಿ ವಂದನಾರ್ಪಣೆ ನೆರವೇರಿಸಿದರು.

LEAVE A REPLY

Please enter your comment!
Please enter your name here