ಶ್ರೀ ಪೇಜಾವರ ಮಠದ ಸೀತಾಸಮೇತ ಶ್ರೀರಾಮದೇವರಿಗೆ ಪಲ್ಲಕ್ಕಿಯಲ್ಲಿ ಹಾಗೂ ಶ್ರೀಗಳರವರಿಗೆ ಲಕ್ಷ್ಮೀನರಸಿಂಹ ಮಠಕ್ಕೆ ಭವ್ಯ ಮೆರವಣಿಗೆ

0

ಕುವೆಟ್ಟು: ಶ್ರೀ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರ ನೇತ್ರತ್ವದಲ್ಲಿ ಮಾ .30 ಲಕ್ಷ್ಮೀನರಸಿಂಹ ಮಠ ಮದ್ದಡ್ಕ ಇಲ್ಲಿ  ಶ್ರೀರಾಮ ನವಮಿ ಪ್ರಯುಕ್ತ ಶ್ರೀ ಮಠದ ಪಟ್ಟದ ದೇವರಾದ ಸೀತಾಸಹಿತ ಶ್ರೀರಾಮ ಚಂದ್ರ ದೇವರಿಗೆ ಪಂಚಾಮ್ರತ ಅಭಿಷೇಕ ಪೂರ್ವಕ ರಾಮೋತ್ಸವ ನಡೆಯಲಿದ್ದು ಮಾ 29 ರಂದು ಶ್ರೀ ಪೇಜಾವರ ಮಠದ ಸೀತಾಸಮೇತ ಶ್ರೀರಾಮದೇವರೀಗೆ ಪಲ್ಲಕ್ಕಿಯಲ್ಲಿ ಹಾಗೂ ಶ್ರೀಗಳವರಿಗೆ ಮದ್ದಡ್ಕ ಕಿನ್ನಿಗೋಳಿಯಿಂದ ಲಕ್ಷ್ಮೀನರಸಿಂಹ ಮಠಕ್ಕೆ ಭವ್ಯ ಸ್ವಾಗತದ ಮೆರವಣಿಗೆ ನಡೆಯಿತು.

ನಂತರ ಭಜನೆ ಪರಮಪೂಜ್ಯ ಶ್ರೀಗಳಿಂದ ರಾಮಾಯಾಣ ಉಪನ್ಯಾಸ ಜರಗಿತು.

ಈ ಸಂದರ್ಭದಲ್ಲಿ ರಘರಾಮ್ ಭಟ್ ಮಠ, ಶರತ್ ಕೃಷ್ಣ ಪಡ್ವೆಟ್ನಾಯ, ರಾಘವೇಂದ್ರ ಭಟ್ ಮಠ,ಗಂಗಾಧರ್ ಭಟ್ ಕೆವುಡೇಲು ಮತ್ತಿತರರು ಉಪಸ್ಥಿತರಿದ್ದು.

LEAVE A REPLY

Please enter your comment!
Please enter your name here