ಬಳಂಜದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ, ಅರಣ್ಯ ಅಧಿಕಾರಿಗಳ ಭೇಟಿ

0

ಬಳಂಜ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಬಳಂಜ ಗ್ರಾಮದ ಬೊಳ್ಳಾಜೆ ಸಮೀಪ ಪರಾರಿ ರಾಮಣ್ಣ ಪೂಜಾರಿಯವರ ಮನೆಯಲ್ಲಿ ರಾತ್ರಿ ಚಿರತೆ ಬಂದು ಹೋಗುವ ದೃಶ್ಯ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಕಳೆದ 3 ತಿಂಗಳ ಹಿಂದೆ ಈ ಬಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಇಟ್ಟಿದ್ದರು. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಇಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದಾರೆ.

ವಲಯ ಅರಣ್ಯಧಿಕಾರಿ ಮಹೀಮ್ ಜನ್ನು, ಉಪ ವಲಯ ಅರಣ್ಯಧಿಕಾರಿ ಕುಶಾಲಪ್ಪ ಗೌಡ,ಬೀಟ್ ಅರಣ್ಯ ಅಧಿಕಾರಿ ಮಂಜುನಾಥ ಎಸ್ ಸವಲಿ,ಅರಣ್ಯ ಇಲಾಖೆಯ ಪೂವಪ್ಪ, ವೆಂಕಪ್ಪ, ಸ್ಥಳಿಯರಾದ ಪ್ರವೀಣ್ ಪೂಜಾರಿ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here