ಕುವೆಟ್ಟು: ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವ

0


ಕುವೆಟ್ಟು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಹಾಗೂ ದ.ಕ.ಜಿ.ಪಂ.ಉ. ಪ್ರಾಥಮಿಕ ಶಾಲೆ ಕುವೆಟ್ಟು ಇದರ ಅಮೃತ ಮಹೋತ್ಸವವು ಡಿ.17ರಂದು ನಡೆಯಿತು. ಅಮೃತ ಮಹೋತ್ಸವ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕರ ಕೆ. ಪ್ರಭಾಕರ ಬಂಗೇರರು ಉದ್ಘಾಟಿಸಿದರು.


ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಆಶಾಲತಾ ರವರು ಸಭಾಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಸದಸ್ಯರಾದ ಸುಮಂಗಲ ಪ್ರಭು, ಅಮೀನ, ಸಿಲ್ವೆಸ್ಟರ್ ಮೋನಿಸ್, ರಿಯಾಝ್, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಸಮನ್ವಯ ಅಧಿಕಾರಿ ಶಂಭು ಶಂಕರ್, ಬೆಳ್ತಂಗಡಿ ಶಿಕ್ಷಣ ಸಂಯೋಜಕರು ಚೇತನಾಕ್ಷಿ ಎಂ, ಕುವೆಟ್ಟು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮಮತಾ ಶೆಟ್ಟಿ, ಶ್ರೀ ಮಹಲಿಂಗೇಶ್ವರ ದೇವಸ್ಥಾನ ಓಡಿಲು ಪ್ರಧಾನ ಅರ್ಚಕರಾದ ರಘುರಾಮ ಭಟ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜ್ ಧರ್ಮ ಗುರುಗಳಾದ ರೇ.ಫಾ ಬೇಸಿಲ್ ವಾಸ್, ಮದ್ದಡ್ಕ ನೂರಾಲ್ ಹುದಾ ಜುಮ್ಮಾ ಮಸೀದಿ, ಧರ್ಮಗುರುಗಳಾದ ಹಸನ್ ಮುಬಾರಕ್ ಸಖಾಪಿ, ಕುವೆಟ್ಟು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಹಿರಿಯ ವಿದ್ಯಾರ್ಥಿ ಅಮ್ಮಿ ಕೋಟ್ಯಾನ್ ಸಬರಬೈಲು, ಮಡಂತ್ಯಾರ್ ಭಾರತ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಅಬ್ಬೋನ್ ಮದ್ದಡ್ಕ, ಗೋವಿಂದ ಭಟ್, ಮುಖ್ಯೋಪಾಧ್ಯಾಯರಾದ ಭಾಸ್ಕರ, ವಿದ್ಯಾರ್ಥಿ ನಾಯಕಿ ಸುಅದ ಮರಿಯಂ ಉಪಸ್ಥಿತರಿದ್ದರು.


ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಂ. ಸಿರಾಜ್ ಚಿಲಿಂಬಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ, ಶಿಕ್ಷಕಿ ದವಲಾ ಕಾರ್ಯಕ್ರಮ ನಿರೂಪಿಸಿ, ಪೂರ್ಣಿಮ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here