ಬೆಳಾಲು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ರಚನೆ

0

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಪುನರ್ ರಚನೆ ಮತ್ತು ಕ್ರೀಡಾಕೂಟ ಜರಗಿತು.

ಸಂಘದ ಗೌರವಾಧ್ಯಕ್ಷರಾಗಿ ಪ್ರವೀಣ ವಿಜಯ್, ಅಧ್ಯಕ್ಷರಾಗಿ ಗಣೇಶ್ ಕನಿಕ್ಕಿಲ, ಕಾರ್ಯಾಧ್ಯಕ್ಷರಾಗಿ ಉಮೇಶ್ ಮಂಜೊತ್ತು, ಕಾರ್ಯದರ್ಶಿಗಳಾಗಿ ಮಹಮ್ಮದ್ ಶರೀಫ್ ಬೆಳಾಲು, ಉಪಾಧ್ಯಕ್ಷರಾಗಿ ಶಶಿಧರ ಒಡಿಪ್ರೊಟ್ಟು, ಜೊತೆ ಕಾರ್ಯದರ್ಶಿಯಾಗಿ ಪಲ್ಲವಿ ಶಾಂತಿಗುಡ್ಡೆ, ಖಜಾಂಜಿಯಾಗಿ ಅನ್ವರ್ ಬೆಳಾಲು ಇವರು ಸರ್ವಾನುಮತದಿಂದ ಆಯ್ಕೆಯಾದರು.

ಇವರೊಂದಿಗೆ ಕ್ರೀಡಾ ಕಾರ್ಯದರ್ಶಿಯಾಗಿ ಸತೀಶ್ ಎಳ್ಳುಗದ್ದೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೀಪಕ್ ಇರೆಂತ್ಯಾರು ರವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಸಂತ ಆಚಾರ್ಯ ಪಾರಳ , ಕಿರಣ್ ಇರೆಂತ್ಯಾರು, ಆರಿಫ್ ಮಾಚಾರು, ಪ್ರಜ್ಞಾ ಶಾಂತಿಗುಡ್ಡೆ ಮತ್ತು ರಾಧೇಶ್ ಬೆಳಾಲು ಇವರನ್ನು ನೇಮಿಸಲಾಯಿತು.

ಗೌರವ ಸಲಹೆಗಾರರಾಗಿ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್, ಶಿಕ್ಷಕ ಪ್ರತಿನಿಧಿಗಳಾಗಿ ಕೃಷ್ಣಾನಂದ ಮತ್ತು ರವಿಚಂದ್ರ ಜೈನ್ ಇವರು ಸಹಕರಿಸಲಿದ್ದಾರೆ. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಲೈಮಾನ್ ಉಪಸ್ಥಿತರಿದ್ದು ಶುಭ ಹಾರೈಸಿದರು.


LEAVE A REPLY

Please enter your comment!
Please enter your name here