






ಪಟ್ಟೂರು: ಸುಳ್ಯದ ಅಮರಶ್ರೀಭಾಗ್ನಲ್ಲಿರುವ ಕುರಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನ. ೨೨ರಂದು ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರೆಂಜ್ ಬೆಲ್ಟ್ (೧೦ ವರ್ಷ) ಕಟ ವಿಭಾಗದಲ್ಲಿ ಸಮನ್ಯು ವಿನಯ್ ಪ್ರಥಮ ಸ್ಥಾನ ಪಡೆದಿದ್ದು ಆರೆಂಜ್ ಬೆಲ್ಟ್ (೧೩ ವರ್ಷ) ಕಟ ವಿಭಾಗದಲ್ಲಿ ದ್ವಿತೀಯ ಪ್ರಣವ್, ತೃತೀಯ ಲೋಹಿತ್ ಕೆ., ಆರೆಂಜ್ ಬೆಲ್ಟ್ (೧೩ ವರ್ಷ) ಕುಮಿಟೆ ವಿಭಾಗದಲ್ಲಿ ತೃತಿಯ ಪ್ರಣವ್, ಗ್ರೀನ್ ಬೆಲ್ಟ್ (೧೦ ವರ್ಷ) ಕಟ ವಿಭಾಗದಲ್ಲಿ ಪ್ರಥಮ ಅದ್ವೈತ್ ಕುಮಾರ್ ಪಿ., ದ್ವಿತೀಯ ಆಕಾಶ್, ಗ್ರೀನ್ ಬೆಲ್ಟ್ (೧೦ ವರ್ಷ) ಕುಮಿಟೆ ವಿಭಾಗದಲ್ಲಿ ದ್ವಿತೀಯ ಅದ್ವೈತ್ ಕುಮಾರ್ ಪಿ., ತೃತೀಯ ಆಕಾಶ್, ಗ್ರೀನ್ ಬೆಲ್ಟ್ (೧೩ ವರ್ಷ) ಕಟ ವಿಭಾಗದಲ್ಲಿ ಗಹನ್ ಕೆ. ಆರ್. ತೃತೀಯ ಬಹುಮಾನ ಗಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ತರಬೇತಿ ನೀಡಿದ್ದಾರೆ.





