






ಬೆಳ್ತಂಗಡಿ: ಕಾಂತಾಜೆ ಶ್ರೀ ಮಹಮ್ಮಾಯಿ ನವೋದಯ ಸ್ವ ಸಹಾಯ ಸಂಘದ ಸದಸ್ಯೆ ಪದ್ಮಾವತಿ ಸೆಪ್ಟೆಂಬರ್ ತಿಂಗಳಲ್ಲಿ ಮರಣ ಹೊಂದಿರುತ್ತಾರೆ. ಅವರಿಗೆ ಬೆಳ್ತಂಗಡಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಸರಕಾರದ (PMGY) ಜೀವನ್ ಜ್ಯೋತಿ ಸುರಕ್ಷಾದಿಂದ ರೂ. ಎರಡು ಲಕ್ಷ ರೂಪಾಯಿ ಮಂಜೂರುಗೊಂಡಿದ್ದು ಅದನ್ನು ಅವರ ವಾರಸುದಾರ ಸುನಿಲ್ ರವರಿಗೆ ಶಾಖೆಯ ಬೆಳ್ತಂಗಡಿ ವ್ಯವಸ್ಥಾಪಕ ಸುಧೀರ್ ನ.25ರಂದು ಹಸ್ತಾಂತರರಿಸಿದರು. ವಲಯ ಮೇಲ್ವಿಚಾರಕಿ ಜಯಂತಿ ಉಪಸ್ಥಿತರಿದ್ದರು.









