


ಬೆಳ್ತಂಗಡಿ: ಧರ್ಮಪ್ರಾಂತ್ಯದ ಧ್ವಿತೀಯ ಧರ್ಮಾಧ್ಯಕ್ಷರಾಗಿ ಜೇಮ್ಸ್ ಪಟ್ಟೇರಿಲ್ ರವರು ನ.5ರಂದು ಪಟ್ಟಾಭಿಶಕ್ತರಾಗಿದ್ದಾರೆ. ಸೀರೋ ಮಲಬಾರ್ ಕಥೋಲಿಕ ಧರ್ಮಸಭೆಯ ಮಹಾ ಧರ್ಮಾಧ್ಯಕ್ಷ ರಾಫೇಲ್ ತಟ್ಟಿಲ್ ಅವರು ಮುಖ್ಯ ಅರ್ಚಕರಾಗಿ, ಆರ್ಚ್ ಬಿಷಪ್ ಜೋಸೆಫ್ ಪಾಮ್ಪ್ಲಾನಿ ತಲಶೇರಿ ಮೆಟ್ರೋ ಪೊಲಿಟನ್ ಧರ್ಮಪ್ರಾಂತ್ಯ ಅವರ ಹಾಗೂ ಭಾರತದ ವಿವಿಧ ಕಡೆಗಳಿಂದ ಆಗಮಿಸಿದ ನಲವತ್ತ ನಾಲ್ಕು ಧರ್ಮಾಧ್ಯಕ್ಷರ ಪುಣ್ಯಸಾನಿಧ್ಯದಲ್ಲಿ ಪಟ್ಟಾಭಿಷೇಕವು ನೆರವೇರಿತು.


ಭಾರತದ ವಿವಿಧ ಕಡೆಗಳಿಂದ ನಾನೂರಕ್ಕೂ ಮಿಕ್ಕಿ ಧರ್ಮಗುರುಗಳು, ಧರ್ಮ ಭಗಿನಿಯರು ಮತ್ತು ನಾಲ್ಕು ಸಾವಿರಕ್ಕೂ ಮೀರಿದ ಕ್ರೈಸ್ತ ಬಾಂಧವರು ಪಾಲ್ಗೊಂಡರು. ಪಟ್ಟಾಭಿಷೇಕದ ನಂತರದ ಸಾರ್ವಜನಿಕ ಸಮ್ಮೇಳನದಲ್ಲಿ ನೂತನ ಧರ್ಮಾಧ್ಯಕ್ಷರಿಗೆ ಅಭಿನಂದನೆಗಳು ಹಾಗೂ ನಿವೃತ್ತರಾಗುವ ಲಾರೆನ್ಸ್ ಮುಕ್ಕುಯಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಮ್ಮೇಳನದಲ್ಲಿ ಮಾತನಾಡಿದ ಭಾರತ ಕಥೋಲಿಕ ಧರ್ಮಧ್ಯಕ್ಷ ಸಮ್ಮೇಳನದ ಅಧ್ಯಕ್ಷ ಆಂಡ್ರೂಸ್ ಥಾಯತ್, “ಜೇಮ್ಸ್ ಅವರು ಜನಹಿತ ಕೆಲಸಗಳನ್ನು ಮಂಚೂಣಿಯಲ್ಲಿ ಇರುವವರು, ಇದರಿಂದ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಈ ನಾಡಿಗೆ ಒಳಿತಾಗುವುದು ಖಚಿತ” ಎಂದರು. “ಕಳೆದ 26ವರ್ಷಗಲ್ಲಿ ಮಾಡಿದ ಅತ್ಯಂತ ಕಠಿಣ ಸಮಯದಲ್ಲಿ ತ್ಯಾಗ ಪ್ರೀತಿ ನಿಷ್ಠೆಯಿಂದ ಮಾಡಿದ ಸೇವೆ ಬಣ್ಣಿಸಲು ಅಸಾಧ್ಯ” ಎಂದು msgr ಆಂಡ್ರಿಯಾ ಫ್ರಾನ್ಸಿಯಾ ಹೇಳಿದರು.









