ಕೊಕ್ಕಡ: ಪ್ರಾ. ಕೃ.ಪ.ಸ. ಸಂಘದ ವಾರ್ಷಿಕ ಮಹಾ ಸಭೆ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಗೊಳಿಸಿದ ಬಳಿಕ ಕುಶಾಲಪ್ಪ ಗೌಡ ಮಾತನಾಡಿ ರೈತರು ಸಂಕಷ್ಟದಲ್ಲಿದ್ದಾರೆ ಮಳೆ ವಿಪರೀತ ವಾದ್ದರಿಂದ ಕೊಳೆ ರೋಗ ಬಂದು ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿ ಬಂದಿದೆ ಸರಕಾರ ಈ ಭಾರಿ ಬೆಳೆವಿಮೆ ಮೊತ್ತವನ್ನು ಆದಷ್ಟು ಬೇಗ ಬಿಡುಗಡೆ ಗೊಳಿಸಿ ರೈತರ ಹಿತ ಕಾಪಾಡಬೇಕು ಎಂದು ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ಅತಿಥಿಗಳನ್ನು ಸ್ವಾಗತಿಸುತ್ತ ಸಂಘದ ಸಾಧನೆಯ ಬಗ್ಗೆ ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ ಸಂಘವು ವಾರ್ಷಿಕ 233.13 ಕೋಟಿ ವಹಿವಾಟು ನಡೆಸಿ 1ಕೋಟಿ 20ಲಕ್ಷಕ್ಕಿಂತಲೂ ಹೆಚ್ಚಿನ ಲಾಭ ಗಳಿಸಿದೆ. ಈ ಭಾರಿ ಸದಸ್ಯರಿಗೆ 15%ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.

ನಮ್ಮ ಸಂಘದಲ್ಲಿ 36ಕೋಟಿಗಿಂತಲೂ ಹೆಚ್ಚಿನ ಠೇವಣಿ ಇದ್ದು 42ಕೋಟಿ ಹೊರಬಾಕಿ ಸಾಲದಲ್ಲಿ ಶೇಖಡಾ 99ರಷ್ಟು ವಸೂಲಾತಿ ಮಾಡಿ ಅಡಿಟ್ ವರ್ಗಿಕರಣದಲ್ಲಿ ಎ ತರಗತಿಯಲ್ಲಿದ್ದೇವೆ ನಮ್ಮ ಈ ಸಾಧನೆಗೆ ಡಿ ಸಿ ಸಿ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಿದ್ದಾರೆ ಎಂದರು. ನಮ್ಮ ಸಂಘದ ನೌಕರರ ಪ್ರಾಮಾಣಿಕ ಕೆಲಸದಿಂದ ಮತ್ತು ನಮ್ಮ ಸಂಘದಲ್ಲಿ ಠೇವಣಿ ಇಟ್ಟ ಹಾಗೂ ಇತರ ಸದಸ್ಯರ ಉತ್ತಮ ಬೆಂಬಲ ದಿಂದ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದರು.

ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಹಿಶಾಂತ್ ಬಿ.ವಿ. ಬಡೆಕ್ಕರ ಮನೆ, ಪ್ರಾಂಜಲ್ ಗೌಡ ಜಾಲುಮನೆ ಪಟ್ರಮೆ, ಶನು ಶಲ್ಫಿ ವಿ. ಎಸ್. ಕೊಡಿ ಮನೆ, ಸ್ಫೂರ್ತಿ ಬಿ.ಎ ಬಡೆಕ್ಕರ ಮನೆ, ಕೃತಿ ಕೆ. ಕೋಡಂದೂರು ಮನೆ ಪಟ್ರಮೆ, ನಿಶಾಂತ್ ನ್ಯೂ ಅರಿಗ ಮನೆ ಇವರನ್ನು ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಸುಜಯ್ ಪೆರ್ಲೆ ಮನೆ, ದೃತಿ ಶಬರಾಡಿ ಮನೆ, ನಿರೀಕ್ಷಾ ಕಾಶಿ ಮನೆ, ಪ್ರಾಂಜಲಿ ಅನಾರು ಮನೆ, ಪೂಜಾ ದೇವಸ್ಯ ಕೋಡಿ, ಮಾನ್ಯಶ್ರೀ ಕಡೀರ, ಭವ್ಯಶ್ರೀ ಬದಿ ಜಾಲು ಮನೆ, ಭರತೇಶ್ ಬಡೆಕೈಲು ಮನೆ,ಪೂಜಶ್ರೀ ಹಾರ ಪುತ್ಯೆ ಮನೆ ಇವರುಗಳನ್ನು ಸನ್ಮಾನಿಸಲಾಯಿತು.
ಸಂಘದ ಕಾರ್ಯವ್ಯಾಪ್ತಿಯಲ್ಲಿ ಅತೀ ಹೆಚ್ಚು ಗೊಬ್ಬರ ಖರೀದಿಸಿದ ಮಾಯಿಲಪ್ಪ ಗೌಡ ಬಟ್ಟಾಡಿ ಮತ್ತು ರಾಘವ ಕೆ ಕೊಲ್ಲಾಜೆ ಹಾಗೂ ಅತೀ ಹೆಚ್ಚು ಅಡಿಕೆಯನ್ನು ಕ್ಯಾoಪ್ಕೋ ಮೂಲಕ ಮಾರಾಟ ಮಾಡಿದ ಕೃಷ್ಣ ಭಟ್ ಹಿತ್ತಿಲು ಇವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು

ಸಂಘದ ಕಾರ್ಯವ್ಯಾಪ್ತಿಯಲ್ಲಿ ಭತ್ತ ಬೆಳೆದು ಸಾಧನೆ ಮಾಡಿದ ಕೊಕ್ಕಡ ಗ್ರಾಮದ ಅಣ್ಣು ಗೌಡ ಹೊಳೆಬದಿ, ವಿಶ್ವನಾಥ ಕಕ್ಕು ದೋಳಿ, ಆನಂದ ಕಕ್ಕು ದೋಳಿ, ಕಿಟ್ಟ ಎಂಕೆ ಕುರ್ಲೆ, ರಾಘವ ಕೊಲ್ಲಾಜೆ, ತಿಮ್ಮಪ್ಪ ಕುಳ್ಳ ಜಾಲು, ಜನಾರ್ಧನ ಶಬರಾಡಿ ಹಾಗೂ ಪಟ್ರಮೆ ಗ್ರಾಮದಿಂದ ಸುಂದರ ಗೌಡ ಗಾಂತೋಟ್ಯ, ಹರೀಶ್ ಕೆಮ ನೋಡಿ, ಶೀನಪ್ಪ ಕೆಮ ನೋಡಿ, ಕೆಂಚಪ್ಪ ಹೊಳೆ ಬದಿ, ನೇಮಣ್ಣ ಹೊಳೆಬದಿ, ಯುವರಾಜ ಜೈನ್ ಉಳಿಯಬೀಡು, ದೇವಪಾಲ ಅಜ್ರಿ ಉಳಿಯಬೀಡು, ಕೊರಗಪ್ಪ ಗೌಡ ಅಪ್ರೂಡಿ, ಲಕ್ಷ್ಮಣ ಗೌಡ ಜಾಲು, ದೊಲ್ಲ ಗೌಡ ಜಾಲು, ರೇವತಿ ಕೋಡಿ ಮಜಲು, ದರ್ನಪ್ಪ ಗೌಡ ಗಾಂತೋಟ್ಯ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ನಿರ್ದೇಶಕರಾದ ವಿಠಲ ಬಂಡಾರಿ, ಉದಯ ಕುಮಾರ್ ಎ., ಶ್ರೀನಾಥ್ ಬಿ., ಪದ್ಮನಾಭ ಗೌಡ ಕೆ., ಅಶ್ವಿನಿ ರವಿ ನಾಯ್ಕ್, ಪ್ರೇಮಾವತಿ ಸುನಿಲ್ ಕೆ., ರವಿಚಂದ್ರ ಪಿ., ವಿಶ್ವನಾಥ ಕಕ್ಕುದೋಲಿ, ಮುತ್ತಪ್ಪ, ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ಮುಖ್ಯ ಕಾರ್ಯನಿರ್ವಾಹನಾಧಿಕಾರಿ ನವೀನ್ ಕುಮಾರ್ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಚೈತನ್ಯ ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿ, ಸಿಬ್ಬಂದಿ ಸುಂದರ ಗೌಡ ಕೆ ನಿರೂಪಿಸಿದರು. ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕೆ ಮಂಡಿಸಿದರು. ಸಂಘದ ನಿರ್ದೇಶಕ ಶ್ರೀನಾಥ್ ಧನ್ಯವಾದವಿತ್ತರು.