
ಬೆಳ್ತಂಗಡಿ: ಮಹಿಳೆಯೋರ್ವರ ಗೆಳೆತನದ ವಿಚಾರವಾಗಿ ಕಾರ್ಕಳದ ವ್ಯಕ್ತಿಯೋರ್ವರನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಕಾರ್ಕಳದ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಮಂಗಳೂರು ಮೂಲದ ನವೀನ್ ಪೂಜಾರಿ.
ಕೊಲೆ ಆರೋಪಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ನಿವಾಸಿ ಸಂಜೀವ ಗೌಡ ಎಂಬುವವರ ಪುತ್ರ ಪರೀಕ್ಷಿತ್ ಗೌಡ ( 44 ವ ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗ್ಗಿನ ಜಾವ ನವೀನ್ ಪೂಜಾರಿಯ ಮೃತ ದೇಹವು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು ಚೂರಿ ಇರಿತದಿಂದ ಗಾಯಗೊಂಡು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಪಕ್ಕದ ಸಿಸಿ ಟಿವಿಯನ್ನು ಪರೀಕ್ಷಿಸಿದಾಗ ಸತ್ಯಾಂಶ ತಿಳಿದು ಪರೀಕ್ಷಿತ್ ಎಂಬಾತನನ್ನು ಬಂಧಿಸಲಾಗಿದೆ.