
ಕುವೆಟ್ಟು: ಬೆಳ್ತಂಗಡಿ ವಲಯ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಗುರುವಾಯನಕೆರೆ ಛಾಯಾಭವನದಲ್ಲಿ ಭವನದಲ್ಲಿ ಜರಗಿತು. ವಲಯದ ಹಿರಿಯ ಸದಸ್ಯ ಕುಶಾಲಪ್ಪ ರೈ ಅವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ವಲಯದ ಅಧ್ಯಕ್ಷ ಸಿಲ್ವಿಯಾ ಕೊರ್ಡೆರೋ, ವಲಯದ ನೂತನ ಅಧ್ಯಕ್ಷ ರವಿ ಪೂಜಾರಿ ನಾರಾವಿ ಹಾಗೂ ವಲಯದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.