
ಬೆಳ್ತಂಗಡಿ: ಲಾಯಿಲದ ವಿಮುಕ್ತಿ ಸ್ವ ಸಹಾಯ ಸಂಘಗಳ ಟ್ರಸ್ಟ್ ಕಪುಚಿನ್ ಕೃಷಿಕ ಸೇವಾ ಕೇಂದ್ರದಿಂದ ಜುಲೈ ತಿಂಗಳಿನಲ್ಲಿ ತಾಲೂಕಿನ 9 ಸರಕಾರಿ ಶಾಲೆಗಳಲ್ಲಿ ಸ್ವಚ್ಛತಾ ಕಿಟ್ ವಿತರಿಸಿ ಮಕ್ಕಳಿಗೆ ಶುಚಿತ್ವದ ಅರಿವು ಮೂಡಿಸಲಾಯಿತು.
ಹಳೆಪೇಟೆ ಸರಕಾರಿ ಶಾಲೆಯಲ್ಲಿ ಆಶಾ ಕಾರ್ಯಕರ್ತೆ ಮಂಜುಳಾ, ಕುಂಟಾಲಪಲಿಕೆ ಸರಕಾರಿ ಶಾಲೆಯಲ್ಲಿ ಸಿಎಚ್ಒ ಜಗದೀಶ್, ಆಶಾ ಕಾರ್ಯಕರ್ತೆ ರಾಜೀವಿ, ಗ್ರಾಮ ಪಂಚಾಯತ್ ಸದಸ್ಯೆ ಭಾರತಿ, ಕೊಯ್ಯೂರು ಸರಕಾರಿ ಶಾಲೆಯಲ್ಲಿ ಸಿಎಚ್ಒ ಗೀತಾ, ಆಶಾಕಾರ್ಯಕರ್ತೆ ಕುಸುಮ, ಮಲೆಬೆಟ್ಟು ಸರಕಾರಿ ಶಾಲೆಯಲ್ಲಿ ಪಿಎಚ್ಸಿಒ ಹರಿಣಾಕ್ಷಿ, ಆಶಾಕಾರ್ಯಕರ್ತೆ ಜಯಂತಿ, ಆರಂಬೋಡಿ ಸರಕಾರಿ ಶಾಲೆಯಲ್ಲಿ ಸಿಎಚ್ಒ ಕಿರಣ್ ಕುಮಾರ್, ಬಂಗಾಡಿ ಸರಕಾರಿ ಶಾಲೆಯಲ್ಲಿ ಆಶಾಕಾರ್ಯಕರ್ತೆ ರಜನಿ, ಕನ್ಯಾಡಿ ಸರಕಾರಿ ಶಾಲೆಯಲ್ಲಿ ಪಿಎಚ್ಸಿಒ ಸೌಮ್ಯ, ಕೊಲ್ಪಾಡಿ ಸರಕಾರಿ ಶಾಲೆಯಲ್ಲಿ ಸಿಎಚ್ಒ ತೇಜೋವತಿ, ಆಶಾ ಕಾರ್ಯಕರ್ತೆಯರಾದ ಪ್ರೇಮಾ ಮತ್ತು ಶೀಲಾವತಿ ಹಾಗೂ ದೇವನಾರಿ ಸರಕಾರಿ ಶಾಲೆಯಲ್ಲಿ ಸಂಸ್ಥೆಯಿಂದ ಮೋಹಿನಿ ಅವರು ಆರೋಗ್ಯ ಮಾಹಿತಿ, ಕೈ ತೊಳೆಯುವ ಸರಿಯಾದ ವಿಧಾನ, ಸಾಂಕ್ರಾಮಿಕ ರೋಗ ತಡೆಗಟ್ಟಲು ಶುಚಿತ್ವದ ಮಹತ್ವ ಈ ಕುರಿತಾದ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಸಂಸ್ಥೆಯಿಂದ ಪ್ರತಿ ಶಾಲೆಗೆ ಎರಡು ಬಕೆಟ್, ಮಗ್, ಟೋಯ್ಲೆಟ್ ಬ್ರಶ್ ಹಾಗೂ 5ಲೀ. ಫಿನಾಯಿಲ್ ಹಂಚಲಾಯಿತು.