ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳದಡಿಯಲ್ಲಿ ಉಜಿರೆ ವಲಯದ ನೀರು ಚಿಲುಮೆ ಒಕ್ಕೂಟದ ಭಕ್ತಿ ಶ್ರೀ ತಂಡದ ಸದಸ್ಯ ಲಲಿತ ಅವರ ಪತಿಗೆ ಬೈಕ್ ಅಪಘಾತ ವಾಗಿ ಎರಡು ಕಾಲು ಬಲಹೀನವಾಗಿ ನಡೆಯಲು ಆಗದೆ ಇರುವ ಕಾರಣಕ್ಕೆ ವೀಲ್ ಚೇರ್ ವಿತರಣೆ ಮಾಡಲಾಯಿತು.
ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷೆ ಜಯಂತಿ, ಕೋಶಾಧಿಕಾರಿ ಮನೋರಮ, ಉಜಿರೆ ವಲಯದ ಮೇಲ್ವಿಚಾರಕಿ ಪೂರ್ಣಿಮಾ, ಸೇವಾ ಪ್ರತಿನಿಧಿ ಪ್ರಮೀಳಾ.ಡಿ, ತಂಡದ ಸದಸ್ಯರು ಉಪಸ್ಥಿತರಿದ್ದರು.