ಬೆಳ್ತಂಗಡಿ ರೋಟರಿಯಿಂದ ವಿನೂತನ ಕಾರ್ಯಕ್ರಮ: ಸಮ್ಮಾನ‌ ಮತ್ತು ಸಂಪನ್ನದಲ್ಲಿ ಸಾಧಕರಿಗೆ ಸನ್ಮಾನ

0

ಬೆಳ್ತಂಗಡಿ:2024-25ನೇ ಸಾಲಿನ ರೋಟರಿ ಕ್ಲಬ್ ಬೆಳ್ತಂಗಡಿಯಿಂದ ಜೂ. 29ರಂದು ಉಜಿರೆಯ ಓಷಿಯನ್ ಪರ್ಲ್ ನಲ್ಲಿ ಸಮ್ಮಾನ ಮತ್ತು ಸಂಪನ್ನ ಕಾರ್ಯಕ್ರಮ‌ ವಿಶೇಷವಾಗಿ ನೆರವೇರಿತು. ಈ ವೇಳೆ ರೋಟರಿಯ ಒಂದು ವರ್ಷದ ಸಾಧನೆಗಳ ಮೆಲುಕು ಜೊತೆಗೆ ಬೆಳ್ತಂಗಡಿ ತಾಲೂಕಿನ ಸಾಧಕರನ್ನು ಸನ್ಮಾನಿಸಲಾಯಿತು.

ಬೆಳ್ತಂಗಡಿಯ ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವವರನ್ನು ಸನ್ಮಾನಿಸಲಾಯಿತು.ರೈಸಿಂಗ್ ಸ್ಟಾರ್ ಇನ್ ಸ್ಪೋರ್ಟ್ಸ್ ಅವಾರ್ಡ್ ಚಂದ್ರಿಕಾರವರಿಗೆ, ಕ್ಯಾಂಪಸ್ ಚೇಂಜ್ ಮೇಕರ್ ಅವಾರ್ಡ್ ಸುಕುಮಾರ್ ಜೈನ್ ಪಡೆದರೆ, ಅಗ್ರಿಲೀಫ್ ನ ಅವಿನಾಶ್ ರಾವ್ ಹಾಗೂ ಅತಿಶಯ್ ಜೈನ್ ರವರಿಗೆ ರೂರಲ್ ಬ್ಯುಸಿನೆಸ್ ಲೀಡರ್ ಶಿಪ್ ಪ್ರಶಸ್ತಿ, ಉಜಿರೆಯ ಕೆ ರಾಮಚಂದ್ರ ಶೆಟ್ಟಿಯವರಿಗೆ ಅನ್ ಸಂಗ್ ಸರ್ವೀಸ್ ಕ್ಲೀನ್ ಲೀನೆಸ್ ಚಾಂಪಿಯನ್ ಪ್ರಶಸ್ತಿ,ಬದುಕು ಕಟ್ಟೋಣದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈಯವರಿಗೆ ಸರ್ವೀಸ್ ಎಬೌ ಸೆಲ್ಫ್ ಇಂಪಾಕ್ಟ್ ಅವಾರ್ಡ್, ಖ್ಯಾತ ವ್ಯಂಗ್ಯಚಿತ್ರಕಾರ ಶೈಲೇಶ್ ಕುಮಾರ್ ಉಜಿರೆರವರಿಗೆ ಕ್ರಿಯೇಟಿವ್ ಎಕ್ಸ್ ಪ್ರೆಸನ್ ಅವಾರ್ಡ್, ಸಂದೀಪ್ ಹೊಳ್ಳರವರಿಗೆ ಫೋಟೋಗ್ರಫಿ ಎಕ್ಸಲೆನ್ಸಿ ಪ್ರಶಸ್ತಿ, ಇತಿಹಾಸ ತಜ್ಞ ಡಾ.ಎಸ್. ಆರ್. ವಿಘ್ನರಾಜ್ ಅವರಿಗೆ ವಾಯ್ಸ್ ಆಫ್ ಮನುಸ್ಕ್ರಿಪ್ಟ್ಸ್ ಅವಾರ್ಡ್, ಮಂಜುಶ್ರೀ ಪ್ರಿಂಟರ್ಸ್ ನ ಶೇಖರ್ ಟಿರವರಿಗೆ ಪ್ರಿಂಟ್ ಹೀರೋ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಇದೇ ವೇಳೆ ರೋಟರಿ ಸದಸ್ಯರಾದ ಡಾ.ಜಯಕುಮಾರ್‌ ಶೆಟ್ಟಿ ಅವರು ರೋಟರಿ ಇಂಟರ್ ನ್ಯಾಷನಲ್ 3181ರ ಜಿಲ್ಲಾ ಸಹಾಯಕ ಗವರ್ನರ್ ಆಗಿರುವುದಕ್ಕೆ ಹಾಗೂ ವಿಜಯವಾಣಿ ವಿಜಯರತ್ನ ಪ್ರಶಸ್ತಿ ಪಡೆದಿರುವ ಎಕ್ಸೆಲ್ ಸಂಸ್ಥೆಯ ಚೇರ್ ಮನ್ ಸುಮಂತ್ ಕುಮಾರ್ ಜೈನ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ರೋಟರಿ ಅಧ್ಯಕ್ಷ ಪೂರನ್ ಯಶೋವರ್ಮ ಮತ್ತು ಕಾರ್ಯದರ್ಶಿ ಸಂದೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.

LEAVE A REPLY

Please enter your comment!
Please enter your name here