ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹರೀಶ್ ರಾವ್ ಕಾಯಡ-ಉಪಾಧ್ಯಕ್ಷರಾಗಿ ಭಾರತಿ ವಲಂಬಳ ಅವಿರೋಧ ಆಯ್ಕೆ

0

ಕಳೆಂಜ: ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯು ಜೂ 25ರಂದು ನಡೆಸುವುದಾಗಿ ಘೋಷಣೆಯಾಗಿತ್ತು ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ದಿಸುವುದಕ್ಕೆ ನಾಮಪತ್ರ ಸಲ್ಲಿಸಲು ಜೂ 14ರಿಂದ 17ರವರೆಗೆ ಅವಕಾಶ ಕಲ್ಪಿಸಲಾಗಿತ್ತು ಈ ಪೈಕಿ ಸಹಕಾರ ಭಾರತಿಯ 11ಅಭ್ಯರ್ಥಿ ಗಳ ನಾಮಪತ್ರಗಳು ಮಾತ್ರ ಸಲ್ಲಿಕೆಯಾದ್ದರಿಂದ ಇನ್ನುಳಿದ ಅನುಸೂಚಿತ ಜಾತಿ ಮೀಸಲು ಮತ್ತು ಅನುಸೂಚಿತ ಪಂಗಡ ಮೀಸಲು ಸ್ಥಾನಕ್ಕೆ ಅಭ್ಯರ್ಥಿಗಳು ಇಲ್ಲವಾದ್ದರಿಂದ ನಾಮಪತ್ರ ಸಲ್ಲಿಸಿದ 11ಜನಸಹಕಾರ ಭಾರತಿ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದು ಜೂ 27ರಂದು ಚುನಾವಣಾ ಅಧಿಕಾರಿ ಪ್ರತಿಮಾ ಬಿ. ವಿ ರವರ ಸಮ್ಮುಖದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಹರೀಶ್ ರಾವ್ ಕಾಯಡ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ಮೂರು ಬಾರಿ ಅಧ್ಯಕ್ಷರಾಗಿ ಹರೀಶ್ ರಾವ್ ಅವರು ಕಾರ್ಯ ನಿರ್ವಹಿಸಿದ್ದು ಇದೀಗ 4ನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷರಾಗಿ ಭಾರತಿ ವಲಂಬಳ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಸುಂದರ ಪೂಜಾರಿ ನೆರೆಂಕಿ ಪಾಲ್ (ಹಿಂದುಳಿದ ವರ್ಗ ಎ ಪ್ರವರ್ಗ),ಸುಬ್ರಾಯ ಗೌಡ ಕೊಡಂಗೆ( ಸಾಮನ್ಯ), ಆನಂದ ಗೌಡ ಭಂಡಾರಿ ಮಜಲು( ಸಾಮಾನ್ಯ), ಮೋಹನ ಗೌಡ ಬದಿಮಾರ್ (ಹಿಂದುಳಿದ ವರ್ಗ ಬಿ ಪ್ರವರ್ಗ), ಶಶಿಕಲಾ ಧನಂಜಯ ಗೌಡ ವಳಚ್ಚಿಲ್ (ಸಾಮಾನ್ಯ), ಚಂದ್ರಶೇಖರ ಗೌಡ ಪಿಲ್ಯಡ್ಕ ( ಸಾಮಾನ್ಯ), ನಾರಾಯಣ ಗೌಡ ಪಲ್ಲದಂಗಡಿ (ಸಾಮಾನ್ಯ), ರತ್ನಕರ ಗೌಡ ಗುತ್ತು (ಸಾಮಾನ್ಯ), ದೇವಿಕ ಪದ್ಮನಾಭ ಗೌಡ ಬೀಜದಡಿ (ಮಹಿಳಾ ಮೀಸಲು) ಕಾರ್ಯ ನಿರ್ವಹಿಸಲಿದ್ದಾರೆ. ಸಂಘದ ಸದಸ್ಯರು, ಕಾರ್ಯದರ್ಶಿ ಸುಶಾಂತ್ ಉಪಸ್ಥಿತರಿದ್ದು ಆಯ್ಕೆ ಪ್ರಕ್ರಿಯೆಗೆ ಸಹಕರಿಸಿದರು.

LEAVE A REPLY

Please enter your comment!
Please enter your name here