ಗ್ರಾಮ ಸಹಾಯಕರಿಲ್ಲದ ಉರುವಾಲು ಗ್ರಾಮ

0

ವರದಿ: ಕಾಸಿಂ ಪದ್ಮುಂಜ.

ಬೆಳ್ತಂಗಡಿ: ಕಂದಾಯ ಇಲಾಖೆಯ ಉರುವಾಲು ಗ್ರಾಮಕರಣಿಕರ ಕಛೇರಿಯಲ್ಲಿ ಗ್ರಾಮ ಸಹಾಯಕರಿಲ್ಲ. ಈ ಗ್ರಾಮದ ಪ್ರಭಾರ ಗ್ರಾಮ ಸಹಾಯಕರಾಗಿದ್ದ ಸದಾಶಿವ ಹೆಗ್ಡೆ ಅವರು ನ. 2024ಕ್ಕೆ ನಿವೃತ್ತಿ ಹೊಂದಿದ್ದು ನಂತರ ಈ ಗ್ರಾಮಕ್ಕೆ ಗ್ರಾಮ ಸಹಾಯಕರು ಬಂದಿಲ್ಲ. ಈ ಗ್ರಾಮಕ್ಕೆ ವೇಣೂರಿನ ಪ್ರಭಾ ಎಂಬುವರನ್ನು ಹಲವಾರು ವರ್ಷದ ಹಿಂದೆಯೇ ನೇಮಕಗೊಳಿಸಿದ್ದರೂ ಇದುವರೆಗೂ ಉರುವಾಲು ಗ್ರಾಮಕರಣಿಕರ ಕಛೇರಿಗೆ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.

ಉರುವಾಲು ಗ್ರಾಮಕರಣಿಕ ಜಾಫಿರ ಅವರಿಗೆ ಉರುವಾಲು ಪಂಡಂಗಡಿ ಗರ್ಡಾಡಿ ಮೂರು ಗ್ರಾಮಗಳು ಪ್ರಭಾರದಲ್ಲಿದ್ದು ಮೂರು ಗ್ರಾಮಗಳ ರೈತರ ಗ್ರಾಮಸ್ಥರ ಸಮಸ್ಯೆಗಳನ್ನು ನಿಭಾಯಿಸುವುದು ಕಷ್ಟಕರವಾಗಿದೆ.

ತಾಲೂಕು ಕಛೇರಿಯ ಮೀಟಿಂಗ್ ಸೇರಿದಂತೆ ಅಗತ್ಯ ಕಾರ್ಯಗಳಿಗೆ ಸ್ಪಂದಿಸಲು ಸರಸಹಾಸ ಪಡುವುದು ಕಂಡುಬರುತ್ತದೆ. ಗ್ರಾಮಸಹಾಯಕರಿದ್ದಲ್ಲಿ ಟಪ್ಪಾಲು ರವಾನೆ ಸೇರಿದಂತೆ ಸಣ್ಣ ಪುಟ್ಟ ಕೆಲಸಕ್ಕಾದರೂ ಸಹಾಯಕವಾಗುತ್ತದೆ. ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನಹರಿಸಿ ತುರ್ತಾಗಿ ಕ್ರಮ ಕೈಗೊಂಡಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗಳಿದೆ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

LEAVE A REPLY

Please enter your comment!
Please enter your name here