ಬೆಳ್ತಂಗಡಿ: ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ ಜೂ. 25ರಂದು ನಡೆಯಿತು. ಕಾರ್ಯಕ್ರಮವನ್ನು ಎಸ್. ಡಿ. ಎಂ ಪಿಯು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯ ಕುಮಾರಿ ಕೆ. ಉದ್ಘಾಟಿಸಿ, ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಅವರು ವಿದ್ಯಾರ್ಥಿ ನಾಯಕತ್ವದ ಮಹತ್ವ ಹಾಗೂ ಜವಾಬ್ದಾರಿಗಳ ಬಗ್ಗೆ ನುಡಿಗಳನ್ನಾಡಿದರು ಮತ್ತು ನೂತನ ಮಂತ್ರಿಗಳಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ ಎಂ.ಆರ್. ಮಂತ್ರಿಗಳಿಗೆ ಬ್ಯಾಡ್ಜ್ ಧರಿಸಿ ಗೌರವಿಸಿದರು. ಶಾಲಾ ನಾಯಕಿ ಪೂರ್ವಿ ಮತ್ತು ಉಪನಾಯಕ ವಿನೀತ್ ತಮ್ಮ ಧನ್ಯವಾದಗಳನ್ನು ವ್ಯಕ್ತಪಡಿಸಿ, ನಡವಳಿಕೆಯ ಮೂಲಕ ನೇತೃತ್ವದ ನೈಜ ಅರ್ಥವನ್ನು ತೋರಿಸುವ ಭರವಸೆ ನೀಡಿದರು.
ಅನಘ ಸ್ವಾಗತಿಸಿದರು. ರಕ್ಷಣ್ ಅತಿಥಿ ಪರಿಚಯ ನೀಡಿದರು. ನಿಧಿಶಾ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು. ಸಂಜನಾ ವಂದನಾರ್ಪಣೆ ಸಲ್ಲಿಸಿದರು.