ನೆರಿಯ: ಗ್ರಾಮದ ಅಂಕೋತ್ಯಾರ್ ಸಿಜು ಅವರ ಮನೆಯ ಪಕ್ಕದಲ್ಲಿ ರಾತ್ರಿ ಚಿರತೆ ಪ್ರತ್ಯಕ್ಷಗೊಂಡ ಘಟನೆ ಜೂ. 24ರಂದು ಮುಂಜಾನೆ 3.30ಕ್ಕೆ ವರದಿಯಾಗಿದೆ. ರಾತ್ರಿ ನಾಯಿ ಬೊಗಳುವ ಶಬ್ದ ಕೇಳಿ ಸಿಜು ಎದ್ದು ನೋಡಿದಾಗ ನಾಯಿಯನ್ನು ಹಿಡಿದು ನಾಯಿಗೆ ಗಾಯ ಮಾಡಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿ ಸಿಜು ಸುದ್ದಿಗೆ ಮಾಹಿತಿ ನೀಡಿದರು.
ವಿಷಯ ತಿಳಿದು ಸ್ಥಳಕ್ಕೆ ನೆರಿಯ ಅರಣ್ಯ ಇಲಾಖೆ ಅಧಿಕಾರಿ ರವಿಚಂದ್ರ ಚಿಬಿದ್ರೆ, ಅಧಿಕಾರಿ ನಾಗೇಶ್, ನೆರಿಯ ಗ್ರಾಮ ಪಂಚಾಯಿತಿ ಸದಸ್ಯ ಬಿ.ಅಶ್ರಫ್, ರೀನಾ ಭೇಟಿ ನೀಡಿದರು. ಚಿರತೆ ಚಲನವಲನ ನೋಡಿ ಬೋನ್ ಮೂಲಕ ಹಿಡಿಯುವ ಕಾರ್ಯಚರಣೆ ಮಾಡಲಾಗುವುದು ಎಂದು ಅರಣ್ಯ ರಕ್ಷಕರು ತಿಳಿಸಿದರು.