ನಿಟ್ಟಡೆ: ವಿಶ್ವ ಪರಿಸರ ದಿನ ಮತ್ತು ಯೋಗ ದಿನಾಚರಣೆ

0

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ – ಕಾಲೇಜು ನಿಟ್ಟಡೆ ವಿದ್ಯಾರ್ಥಿ ಸಂಘ ಮತ್ತು ವಿಶ್ವ ಪರಿಸರ ದಿನ, ವಿಶ್ವ ಯೋಗ ದಿನಾಚರಣೆಯು ಜೂ.21ರಂದು ಬಹಳ ವಿಜೃಂಭಣೆಯಿಂದ ನಡೆಯಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥಾಪಕ ಗಿರೀಶ್ ಕೆ. ಎಚ್. ಅಧ್ಯಕ್ಷತೆಯನ್ನು ವಹಿಸಿದ್ದು, ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣವನ್ನು ತಿಳಿಸಿದರು. ಹಾಗೆಯೇ ಸಂಚಾಲಕ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ವಿಶ್ವ ಪರಿಸರ ದಿನ ಮತ್ತು ಶಾಲಾ-ಕಾಲೇಜಿನ ನಾಯಕರಿಗೆ ತಮ್ಮ ಕರ್ತವ್ಯವನ್ನು ಕ್ರಮಬದ್ಧವಾಗಿ ನಿರ್ವಹಿಸಲು ಕಿವಿಮಾತು ನೀಡಿದರು.

ಅತಿಥಿಯಾಗಿ ಆಗಮಿಸಿದ ಆಲೂರು ಪಂಚಾಯತ್ ಸದಸ್ಯ ರವೀಂದ್ರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜೆಇಇ ಯಲ್ಲಿ 34ನೇ ರ್‍ಯಾಂಕ್ ಪಡೆದ ಹಳೆ ವಿದ್ಯಾರ್ಥಿಯಾದ ವಿಘ್ನೇಶ್ ಅವರ ಸಹೋದರ ಪೂಜಿತ್ ಕುಲಾಲ್ ರಿಗೆ ಸನ್ಮಾನಿಸಲಾಯಿತು. ಕಾಲೇಜಿನ ನಾಯಕರಾಗಿ ದಿಗಂತ್ ಉಪನಾಯಕರಾಗಿ ವಿನಯ್ ಹಾಗೂ ಶಾಲಾ ನಾಯಕರಾಗಿ 9ನೇ ತರಗತಿಯ ಮಹಮ್ಮದ್ ಅಜೀಮ್, ಸಭಾಪತಿಯಾಗಿ 10ನೇ ತರಗತಿಯ ಮಾಸ್ಟರ್ ಭುವನ್, ಉಪನಾಯಕರಾಗಿ 7ನೇ ತರಗತಿಯ ಮಾಸ್ಟರ್ ಜಯಂತ್ ಹಾಗೂ ಎಲ್ಲಾ ವಿಭಾಗಗಳ ನಾಯಕರುಗಳು ಪ್ರಮಾಣವಚನವನ್ನು ಸ್ವೀಕರಿಸಿದರು.

ಕಾಲೇಜಿನ ಪ್ರಾಂಶುಪಾಲ ಓಮನ ಎಂ.ಎ., ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ವೇತಾ ಅಶೋಕ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್. ಎನ್. ಹಾಗೂ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶುಭ ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ರಶ್ಮಿ ಮತ್ತು ಜೀವಶಾಸ್ತ್ರ ಉಪನ್ಯಾಸಕ ಮನೋಜ್ ಕಾರ್ಯಕ್ರಮವನ್ನು ನಿರೂಪಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಶರಣ್ಯ ಕೆ.ಎಸ್. ವಂದಿಸಿದರು.

LEAVE A REPLY

Please enter your comment!
Please enter your name here