ರಾಜ್ಯ ಕಾಂಗ್ರೇಸ್ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ವೇಣೂರು ಪಂಚಾಯತ್ ಮುಂದೆ ಪ್ರತಿಭಟನೆ – ಕಾಂಗ್ರೆಸ್ ಜನದ್ರೋಹಿ ಸರ್ಕಾರ: ಶಾಸಕ ಹರೀಶ್ ಪೂಂಜ

0

ವೇಣೂರು: ಕಾಂಗ್ರೆಸ್ ಸರ್ಕಾರ‌ ಜನರಿಗೆ ಮರುಳು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲವೆಂದು ಹೇಳುತ್ತಾ ಜನದ್ರೋಹಿ ಆಡಳಿತ ಮಾಡಿ ತನ್ನ ಮುಖ ಪೂರ್ತಿ ಮಸಿ ಎರಚಿಕೊಂಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ವೇಣೂರು ಗ್ರಾ.ಪಂ ವಠಾರದಲ್ಲಿ ‌ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವೃದ್ಯಾಪ್ಯ ವೇತನ, ವಿಧವಾ ವೇತನ, ಸಂದ್ಯಾ ಸುರಕ್ಷಾ ಕಡಿತ ಮಾಡುವ ಕೆಲಸ ಮಾಡುತ್ತಿದೆ. ಮೂಡಾದ ಮೂಲಕ 11/9 ಕೊಡುವ ನಿಯಮವನ್ನು ವಾಪಾಸ್ ಪಡೆದು ಪಂಚಾಯತ್ ನಿಂದಲೇ ಕೊಡುವಂತೆ ಮಾಡಬೇಕು. ಕೆಂಪು ಕಲ್ಲು ಹಾಗೂ ಮರಳು ಸಾಗಾಟ ನಿಯಮ ಸಡಿಲ ಮಾಡಬೇಕು, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ರಾಜ್ಯಪಾಲರಿಗೆ ನೀಡುವ ಮನವಿ ಪತ್ರವನ್ನು ಪಿ ಡಿ ಓಗೆ ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here